‘ಕ್ಷಣ ಕ್ಷಣಕ್ಕೂ ಕೊಡ್ತೀವಿ, ತಗೋತಾ ಇರ್ಬೇಕು’; ಗಿಲ್ಲಿಗೆ ಅಶ್ವಿನಿ ಚಾಲೆಂಜ್
ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಹಾಗೂ ಧ್ರುವಂತ್ ಒಟ್ಟಾಗಿ ಇರುತ್ತಾರೆ. ಇವರನ್ನು ಟೀಕಿಸುವ ಕೆಲಸವನ್ನು ಮಾಡ್ತಾ ಇರೋದು ಗಿಲ್ಲಿ ನಟ. ಇಬ್ಬರನ್ನೂ ಕೆಣಕಿ ಅವರು ಸಾಕಷ್ಟು ಚರ್ಚೆಗೆ ಕಾರಣರಾಗಿದ್ದಾರೆ. ಇವರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಅವರು ಸ್ಟ್ರಾಂಗ್ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಈಗ ಇವರು ಅಶ್ವಿನಿ ಹಾಗೂ ಧ್ರುವಂತ್ನ ಕೆಣಕಿದ್ದಾರೆ. ಇದರ ಪರಿಣಾಮ ಜೋರಾಗಿಯೇ ಆಗಿದೆ. ‘ಕ್ಷಣ ಕ್ಷಣಕ್ಕೂ ಕೊಡ್ತೀವಿ, ತಗೋತಾ ಇರ್ಬೇಕು’ ಎಂದು ಅಶ್ವಿನಿ ಹಾಗೂ ಧ್ರುವಂತ್ ಚಾಲೆಂಜ್ ಮಾಡಿದ್ದಾರೆ. ಕೆಣಕಿದಾಗ ಅಶ್ವಿನಿ ಉರಿದು ಬೀಳುತ್ತಿದ್ದರು. ಆದರೆ, ನಂತರ ಅವರ ಆಟದಲ್ಲಿ ಬದಲಾವಣೆ ಆಗಿತ್ತು. ಈಗ ಅವರು ಮತ್ತೆ ಹಳೆ ಫಾರ್ಮ್ಗೆ ಮರಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
