Mountaineering: ಕನ್ನಡಿಗ ಟ್ರೆಕ್ಕರ್​​ಗಳ ಸಾಧನೆ, ಹಿಮಾಚಲ ಪ್ರದೇಶದ ದುರ್ಗಮ ಪಿನ್ ಪರ್ವತಿ ಕಣಿವೆಯ ಶಿಖರ ತಲುಪಿದ ಗೋಕರ್ಣ ಯುವಕರು!

Updated on: Jun 23, 2023 | 1:49 PM

ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಕೇವಲ 12 ತಂಡಗಳು ಮಾತ್ರ ಈ ಸಾಹಸಯಾತ್ರೆ ಯಶಸ್ವೀಯಾಗಿ ಪೂರೈಸಿವೆ.

ಬೆಂಗಳೂರು: ಹಿಮಾಚಲದ ಪ್ರದೇಶದ ಪರ್ವತ ಪ್ರದೇಶದಲ್ಲಿ ಅತ್ಯಂತ ಎತ್ತರ ಮತ್ತು ದುರ್ಗಮ ಎನಿಸಿರುವ ಪಿನ್ ಪರ್ವತಿ ಕಣಿವೆಯ (Pin Parvati mountain pass) ಶಿಖರ ತಲುಪುವುದು ಟ್ರೆಕ್ಕಿಂಗ್ ಉತ್ಸಾಹಿಗಳಿಗೆ (trekkers) ನಿಸ್ಸಂದೇಹವಾಗಿ ಒಂದು ದೊಡ್ಡ ಸವಾಲು. ಇದರ ಎತ್ತರ 17,450 ಅಡಿಗಳಾಗಿದ್ದು ಚಾರಣ ಯಾಕೆ ಕಠಿಣವೆಂದರೆ, ಇಲ್ಲಿನ ತಾಪಮಾನ ಮೈನಸ್ 10 ಡಿಗ್ರಿಗಳಷ್ಟಿರುತ್ತದೆ. ಆದರೆ ರಾಜ್ಯದ ಗೋಕರ್ಣದವರಾಗಿರುವ (Gokarna) ಮಹೇಶ್ ಹೀರಗಂಗೆ, ಗಣೇಶ್ ಮೂಳೆ, ಕುಮಾರ ಗೋಪಿ, ಶ್ರೀನಿಧಿ ಮೂಳೆ ಮತ್ತು ಧೃವ ಛಾಪಖಂಡ್ ಪಿನ್ ಪರ್ವತಿಯ ಶಿಖರ ತಲುಪಿ ಕನ್ನಡಿಗರಲ್ಲಿ ಹೆಮ್ಮೆ ಮೂಡಿಸಿದ್ದಾರೆ. ಶಿಖರ ತಲುಪಲು 120 ಕಿಮೀ ದೂರವನ್ನು 8 ರಾತ್ರಿ ಮತ್ತು 9 ಹಗಲುಗಲ್ಲಿ ಕ್ರಮಿಸಿದ್ದಾರೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಕೇವಲ 12 ತಂಡಗಳು ಮಾತ್ರ ಈ ಸಾಹಸಯಾತ್ರೆ ಯಶಸ್ವೀಯಾಗಿ ಪೂರೈಸಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 23, 2023 12:50 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More