Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ಯಾರಂಟಿ ಯೋಜನೆಗಳಿಗೆ ಜಾತಿಯಿಲ್ಲ, ಎಲ್ಲ ಜಾತಿಯವರು ಅವುಗಳ ಫಲಾನುಭವಿಗಳು: ಸಿಎಂ

ಗ್ಯಾರಂಟಿ ಯೋಜನೆಗಳಿಗೆ ಜಾತಿಯಿಲ್ಲ, ಎಲ್ಲ ಜಾತಿಯವರು ಅವುಗಳ ಫಲಾನುಭವಿಗಳು: ಸಿಎಂ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 13, 2024 | 7:48 PM

ಗ್ಯಾರಂಟಿ ಯೋಜನೆಗಳಿಗೆ ಜಾತಿ ಇಲ್ಲ, ಎಲ್ಲ ಜಾತಿಯವರು ಯೋಜನೆಗಳ ಫಲಾನುಭವಿಗಳು; ಹಾಗೆಯೇ ಈ ಯೋಜನೆಗಳು ಕೇವಲ ಕಾಂಗ್ರೆಸ್​ಗೆ ವೋಟು ಹಾಕಿದವವರಿಗೆ ಮಾತ್ರ ಅಲ್ಲ, ಬಿಜೆಪಿಯವರೂ ಅವುಗಳ ಫಲ ಉಣ್ಣುತ್ತಿದ್ದಾರೆ, ಈ ಸರ್ಕಾರದಿಂದ ಅನುಕೂಲವಾಗಿದೆ ಅಂತ ಜನರೇ ವಿರೋಧ ಪಕ್ಷಗಳಿಗೆ ಹೇಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಮೈಸೂರು: ಜಿಲ್ಲೆಯ ಹೊರಳಹಳ್ಳಿಯಲ್ಲಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಮಾತಾಡಿದ ಸಿಎಂ ಸಿದ್ದರಾಮಯ್ಯ, ತಾವು ಬಡವರಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ ಶೋಷಿತರಿಗೆ, ಹಿಂದುಳಿದವರಿಗೆ, ಪರಿಶಿಷ್ಟ ಜಾತಿ/ಜನಾಂಗದವರಿಗೆ ಸಹಾಯ ಮಾಡುತ್ತಿರುವುದು ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಸರಿಕಾಣಿತ್ತಿಲ್ಲ, ಹಾಗಾಗೇ ಏನಾದರೂ ಮಾಡಿ ತನ್ನನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕೆಂದು ಪ್ರಯತ್ನಿಸುತ್ತಿದ್ದಾರೆ, ಆದರೆ ತನ್ನನ್ನು ತಡವಿಕೊಂಡರೆ ಕರ್ನಾಟಕದ ಜನತೆ ಸುಮ್ಮನಿರಲ್ಲ ಎಂದು ಅವರಿಗೆ ಹೇಳಿದ್ದೇನೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಸಚಿವ ಸಂಪುಟ ಪುನಾರಚನೆ ಇಲ್ಲ, ನಾಗೇಂದ್ರಗೆ ಸಚಿವ ಸ್ಥಾನ ನೀಡುವ ಬಗ್ಗೆಯಷ್ಟೇ ಚರ್ಚೆ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ