Drunkard’s take: ಯಡಿಯೂರಪ್ಪ-ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದಲ್ಲಿ ಎಣ್ಣೆ ಆಗ್ಗವಾಗಿತ್ತು, ಸಿದ್ದರಾಮಯ್ಯ ತಪ್ಪು ಮಾಡ್ತಿದ್ದಾರೆ! ಎಣ್ಣೆಪ್ರಿಯ ಚಂದ್ರೇಗೌಡ

ಮಹಿಳೆಯರು ಬಸ್ಸಲ್ಲಿ ತಿರುಗಾಡುವುದು ಕಮ್ಮಿ, ಪುರುಷರು ಜಾಸ್ತಿ ತಿರುಗಾಡುವುರಿಂದ ಅವರಿಗೆ ಈ ಸೌಲಭ್ಯ ನೀಡಬೇಕಿತ್ತು ಅನ್ನೋದು ಗೌಡರ ವಾದ!

Drunkard’s take: ಯಡಿಯೂರಪ್ಪ-ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದಲ್ಲಿ ಎಣ್ಣೆ ಆಗ್ಗವಾಗಿತ್ತು, ಸಿದ್ದರಾಮಯ್ಯ ತಪ್ಪು ಮಾಡ್ತಿದ್ದಾರೆ! ಎಣ್ಣೆಪ್ರಿಯ ಚಂದ್ರೇಗೌಡ
|

Updated on: Jun 10, 2023 | 3:03 PM

ಬೆಂಗಳೂರು: ಒಳಗೆ ಸೇರಿದರೆ ಗುಂಡು ಹುಡುಗಿಯಾಗುವಳು ಗಂಡು ಅಂತ ಮೂರೂವರೆ ದಶಕಗಳ ಹಿಂದೆ ಮಾಲಾಶ್ರೀ ಹಾಡಿದರು, ಆದರೆ ಗುಂಡನ್ನು ಹೊಟ್ಟೆಗಿಳಿಸಿದ ಗಂಡು ಏನಾಗುತ್ತಾನೆ? ಮಂಡ್ಯದ ಚಂದ್ರೇಗೌಡ (Chandregowda) ಆಗುತ್ತಾನೆ! ನಗರದ ವೈನ್ ಶಾಪೊಂದರಲ್ಲಿ ಎಣ್ಣೆ ಹೊಡೆದು ಕಿಕ್ ತಲೆಗೇರಿಸಿಕೊಂಡ ಚಂದ್ರೇಗೌಡ ಹೇಳುವ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿ ತಪ್ಪು ಮಾಡಿದ್ದಾರೆ! ಮಹಿಳೆಯರು ಬಸ್ಸಲ್ಲಿ ತಿರುಗಾಡುವುದು ಕಮ್ಮಿ, ಪುರುಷರು ಜಾಸ್ತಿ ತಿರುಗಾಡುವುರಿಂದ ಅವರಿಗೆ ಈ ಸೌಲಭ್ಯ ನೀಡಬೇಕಿತ್ತು ಅನ್ನೋದು ಗೌಡರ ವಾದ! ರಾಜ್ಯದಲ್ಲಿ ಮದ್ಯದ ಮೇಲೆ ತೆರಿಗೆ ಹೆಚ್ಚಿಸುವ ಯೋಚನೆ ಸರ್ಕಾರ ಮಾಡುತ್ತಿರುವುದು ಗೌಡರಿಗೆ ಕಿರಿಕಿರಿ ಉಂಟುಮಾಡಿದೆ. ಬಿಎಸ್ ಯಡಿಯೂರಪ್ಪ (BS Yediyurappa) ಮತ್ತು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರ ಸರ್ಕಾರ ಅಧಿಕಾರದಲ್ಲಿದ್ದಾಗ, ಲಿಕ್ಕರ್ ಬಹಳ ಅಗ್ಗ ದರದಲ್ಲಿ ಸಿಗುತಿತ್ತು, ಅ ಸರ್ಕಾರವೇ ಚೆನ್ನಾಗಿತ್ತು, ಸಿದ್ದರಾಮಯ್ಯ ತಪ್ಪು ಮಾಡುತ್ತಿದ್ದಾರೆ ಎಂದು ಚಂದ್ರೇಗೌಡರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us