ಹಿರಿಯೂರಲ್ಲಿ ಆಲಿಕಲ್ಲು ಸಮೇತ ಜೋರು ಮಳೆ, ಕಾದ ಹೆಂಚಿನಂತಾಗಿದ್ದ ರಸ್ತೆಗಳು ತಂಪು-ತಂಪು

Updated on: Apr 11, 2025 | 8:01 PM

ಇವತ್ತು ಬೆಳಗ್ಗೆ ಮಂಗಳೂರಲ್ಲಿ ಜೋರು ಮಳೆ, ಅದಕ್ಕೂ ಮೊದಲು ಧಾರವಾಡದಲ್ಲಿ ಮಳೆರಾಯ ಸುರಿದಿದ್ದ. ಬೆಂಗಳೂರು ನಗರದಲ್ಲಿ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗುತ್ತಿದೆಯಾದರೂ ಕಳೆದ ವಾರದಂತೆ ಈ ವಾರ ಮಳೆಯಾಗಿಲ್ಲ. ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಈ ವಾರ ಮಳೆಯಾಗಿದೆ. ನಾವಿನ್ನೂ ಏಪ್ರಿಲ್ ತಿಂಗಳ ಫೂರ್ವಾರ್ಧದಲ್ಲಿದ್ದೇವೆ. ಇನ್ನೂ ಎರಡು ತಿಂಗಳು ಬೇಸಿಗೆಯ ಧಗೆ.

ಚಿತ್ರದುರ್ಗ, ಏಪ್ರಿಲ್ 11: ಕಳೆದೊಂದು ವಾರದಿಂದ ಅಥವಾ ಅದಕ್ಕೂ ಸ್ವಲ್ಪ ಹೆಚ್ಚಿನ ಸಮಯದಿಂದ ರಾಜ್ಯದ ನಾನಾಭಾಗಗಳಲ್ಲಿ ಮಳೆಯಾಗುತ್ತಿದೆ ಮತ್ತು ಉರಿ ಬೇಸಿಗೆಯಲ್ಲಿ (hot summer) ಹೆಂಚಿನಂತೆ ಕಾಯುತ್ತಿರುವ ಭೂಮಿ ತಾತ್ಕಲಿಕವಾಗಿಯಾದರೂ ತಂಪಾಗುತ್ತಿದೆ ಮಾರಾಯ್ರೇ. ಚಿತ್ರದುರ್ಗ ಬಿಸಿಲು ಜಾಸ್ತಿಯಿರುವ ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಂದು. ಇಂದು ಮಧ್ಯಾಹ್ನ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ಆಲಿಕಲ್ಲು ಸಮೇತ ಜೋರು ಮಳೆ. ಗುಡುಗು, ಮಿಂಚನ್ನು ಸಹ ವಿಡಿಯೋದಲ್ಲಿ ಕೇಳಿಸಿಕೊಳ್ಳಬಹುದು ಮತ್ತು ನೋಡಬಹುದು. ದಿಢೀರ್ ಆಲಿಕಲ್ಲು ಸಮೇತ ಜೋರು ಮಳೆಯಿಂದ ರಸ್ತೆಗಳು ತಣ್ಣಗಾಗಿವೆ.

ಇದನ್ನೂ ಓದಿ: ಮಂಗಳೂರು: ಭಾರೀ ಮಳೆ, ಗಾಳಿಯಿಂದ ಮೆಸ್ಕಾಂಗೆ 33.4 ಕೋಟಿ ರೂ. ನಷ್ಟ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ