‘ಪ್ಯಾನ್ ಇಂಡಿಯಾ ಅಂದ್ರೆ ಹೀರೋಗಳ ಶೋಕಿ; ದಾಡಿ, ಬಾಡಿ ಬೆಳೆಯತ್ತೆ ಅಷ್ಟೇ’: ಹಂಸಲೇಖ ಗರಂ

Updated on: Jul 15, 2024 | 10:54 PM

ಕನ್ನಡದ ಹಲವು ನಟರು ಪ್ಯಾನ್​ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ. ‘ಸ್ಯಾಂಡಲ್​ವುಡ್​ ಜೊತೆ ಬೇರೆ ಯಾವುದನ್ನೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಒಂಟಿಯಾಗಿ ಗಂಧದ ಮರ ಬೆಳೆಯಲ್ಲ. ಬೇರೆ ಮರಗಳು ಸುತ್ತಲು ಇದ್ದಾಗ ಮಾತ್ರ ಬೆಳೆಯುತ್ತೆ. ಎಲ್ಲರನ್ನೂ ಒಳಗೊಂಡು ಬೆಳೆಯುವುದು ಸ್ಯಾಂಡಲ್​ವುಡ್​. ಅದಕ್ಕೆ ಒಂದು ಪರಂಪರೆ ಇದೆ’ ಎಂದು ಹಂಸಲೇಖ ಹೇಳಿದ್ದಾರೆ.

ಪ್ಯಾನ್​ ಇಂಡಿಯಾ ಸಿನಿಮಾಗಳ ಟ್ರೆಂಡ್​ ಜೋರಾಗಿದೆ. ಈ ಟ್ರೆಂಡ್​ನಲ್ಲಿ ಕನ್ನಡದ ಸ್ಟಾರ್​ ಹೀರೋಗಳು ಕೂಡ ಸಿಲುಕಿದ್ದಾರೆ. ಈ ಬಗ್ಗೆ ಸಂಗೀತ ನಿರ್ದೇಶಕ ಹಂಸಲೇಖ ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ‘ಗೌರಿ’ ಸಿನಿಮಾದ ಇವೆಂಟ್​ನಲ್ಲಿ ಭಾಗಿ ಆಗಿದ್ದ ಅವರು ಕೊಂಚ ಗರಂ ಆಗಿಯೇ ಮಾತನಾಡಿದ್ದಾರೆ. ‘ಪ್ಯಾನ್​ ಇಂಡಿಯಾ ಎಂಬ ಹುಚ್ಚು ಬಂದು ಕನ್ನಡದ ಸೂಪರ್​ ಸ್ಟಾರ್​ಗಳಿಗೆ ಕನ್ನಡದ ಬೇರುಗಳು ಕಟ್​ ಆಗಿವೆ. ಕನ್ನಡದ ಜೊತೆ ಇದ್ದ ಕನೆಕ್ಷನ್​ ಕಟ್​ ಆಗಿದೆ. ಇವರೆಲ್ಲ ಭಾರತದಾದ್ಯಂತ ಖ್ಯಾತ ನಾಯಕರಾಗುತ್ತಾರೆ ಎಂಬುದು ಒಂದು ಭ್ರಮೆ. ದಕ್ಷಿಣದ ಸುಂದರವಾದ ನಾಯಕಿಯರು ಉತ್ತರ ಭಾರತಕ್ಕೆ ಹೋಗಿ 20 ವರ್ಷ ಬದುಕಬಹುದು ಅಷ್ಟೇ. ರಜನಿಕಾಂತ್​, ಕಮಲ್​ ಹಾಸನ್​, ಮಮ್ಮುಟಿ, ಮೋಹನ್​ ಲಾಲ್​ ಬಾಂಬೆಗೆ ಹೋದರೆ 2 ವರ್ಷ ಇರೋಕೆ ಆಗಲ್ಲ. ನಮ್ಮ ಹೀರೋಗಳಿಗೆ ಪ್ಯಾನ್​ ಇಂಡಿಯಾ ಎಂಬುದು ಸದ್ಯದ ಶೋಕಿ. ಒಂದು ಹನಿಮೂನ್​ ಥರ. ಎಲ್ಲಿ ಸುತ್ತಿದ್ದರು ಕನ್ನಡಕ್ಕೆ ವಾಪಸ್ ಬರಲೇಬೇಕು. ಪ್ಯಾನ್​ ಇಂಡಿಯಾ ಅಂತ ಹೋದರೆ ಸ್ವಲ್ಪ ವ್ಯಾಪಾರ ಆಗಬಹುದು. ನಟರ ದಾಡಿ, ಬಾಡಿ ಬೆಳೆಯುತ್ತೆ ಅಷ್ಟೇ. ಬೇರೆ ಏನೂ ಬೆಳೆಯಲ್ಲ’ ಎಂದು ಹಂಸಲೇಖ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More