ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್ ಮಾಡಿದ ಗುಂಡಿನದಾಳಿಯಲ್ಲಿ ಬಚಾವಾಗಿದ್ದ ಮಹಿಮದಾಸ್
Hanur Forest Firing: ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ವ್ಯಾಪ್ತಿಯಲ್ಲಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳದಲ್ಲಿದ್ದ ನಾಲ್ಕನೇ ವ್ಯಕ್ತಿ ಮಹಿಮದಾಸ್ ಎಂಬಾತ ಅಜ್ಞಾತ ಸ್ಥಳದಿಂದ ವೀಡಿಯೋ ಸಂದೇಶ ಬಿಡುಗಡೆಗೊಳಿಸಿದ್ದು, ಘಟನೆಯ ಪ್ರಮುಖ ಮಾಹಿತಿ ಹಂಚಿಕೊಂಡಿದ್ದಾರೆ. ಅವತ್ತು ಅಲ್ಲಾಗಿದ್ದೇನು? ಎಂಬಿತ್ಯಾದಿ ವಿಚಾರಗಳು ಇಲ್ಲಿವೆ.
ಚಾಮರಾಜನಗರ, ಆಗಸ್ಟ್ 18: ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಹನೂರಿನಲ್ಲಿ ಮೂವರು ಬಲಿ ವೇಳೆ ಸ್ಥಳದಲ್ಲಿದ್ದರೂ ಬಚಾವಾಗಿದ್ದ ಮಹಿಮದಾಸ್ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಅರಣ್ಯ ಸಿಬ್ಬಂದಿ ಶೂಟೌಟ್ ಮಾಡುವೆ ವೇಳೆ ಪರಾರಿಯಾಗಿ ಆಸ್ಪತ್ರೆ ಸೇರಿದ್ದೆ, ಈಗ ಹೊರ ಬರಲು ಭಯ ಆಗ್ತಿದೆ. ಕೇಸ್ ಬಗ್ಗೆ ಪೊಲೀಸರು, ಅರಣ್ಯ ಇಲಾಖೆ ತನಿಖೆ ಮಾಡ್ತಿದ್ದಾರೆ. ವಿಚಾರಣೆಗೆ ಬರುವಂತೆ ಹೇಳ್ತಿದ್ದಾರೆ. ಆದ್ರೆ ನನಗೆ ಪೊಲೀಸ್ ಅಂದ್ರೆ ಭಯ. ಆ ಕಾರಣದಿಂದ ಆಚೆ ಬರಲು ಹಿಂದೇಟು ಹಾಕುತ್ತಿರುವೆ ಎಂದವರು ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Aug 18, 2026 04:35 PM
Loading...
Unable to load recommendations.
Follow Us
