AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೋಡೆತ್ತುಗಳ ನಡುವೆ ಪುನಃ ಸಾಮರಸ್ಯ ಮೂಡಿದೆಯೇ? ಕುಮಾರಸ್ವಾಮಿ ಮಾತು ಕೇಳಿದರೆ ಹಾಗನ್ನಿಸದಿರದು!

ಜೋಡೆತ್ತುಗಳ ನಡುವೆ ಪುನಃ ಸಾಮರಸ್ಯ ಮೂಡಿದೆಯೇ? ಕುಮಾರಸ್ವಾಮಿ ಮಾತು ಕೇಳಿದರೆ ಹಾಗನ್ನಿಸದಿರದು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Sep 19, 2022 | 1:03 PM

Share

ತಾನೊಬ್ಬ ಉದ್ಯಮಿ, ವ್ಯವಸಾಯಗಾರ ಮತ್ತು ರಾಜಕಾರಣಿ ಅಗಿರುವುದರಿಂದ ಭ್ರಷ್ಟಾಚಾರ ನಡೆಸುವ ಅವಶ್ಯಕತೆ ತನಗಿಲ್ಲ ಅಂತ ಖುದ್ದು ಶಿವಕುಮಾರ ಅವರೇ ಹೇಳಿರುವುದರಿಂದ ಈಡಿ ನೋಟಿಸ್ ಗೆ ಸಪರ್ಮಕವಾದ ಉತ್ತರ ನೀಡುವ ಸಾಮರ್ಥ್ಯ ಅವರಲ್ಲಿದೆ ಎಂದು ಹೇಳಿದರು.

ಬೆಂಗಳೂರು:  ವಿಧಾನ ಸೌಧ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ಸಚಿವ ಎಸ್ ಟಿ ಸೊಮಶೇಖರ್ (ST Somashekhar) ಅವರ ವಿರುದ್ಧ ತನಿಖೆ ನಡೆಸಲು ಹೈಕೋರ್ಟ್ ಆದೇಶ ನೀಡಿರುವುದರಿಂದ ತನಿಖೆ ಸರಾಗವಾಗಿ ನಡೆಯಲು ಸಚಿವರು ರಾಜೀನಾಮೆ ಸಲ್ಲಿಸಬೇಕೆಂದು ಹೇಳಿದರು. ಮುಂದುವರಿದು ಮಾತಾಡಿದ ಅವರು, ಡಿಕೆ ಶಿವಕುಮಾರ (DK Shivakumar) ಅವರು ತಾನೊಬ್ಬ ಉದ್ಯಮಿ, ವ್ಯವಸಾಯಗಾರ ಮತ್ತು ರಾಜಕಾರಣಿ ಅಗಿರುವುದರಿಂದ ಭ್ರಷ್ಟಾಚಾರ ನಡೆಸುವ ಅವಶ್ಯಕತೆ ತನಗಿಲ್ಲ ಅಂತ ಖುದ್ದು ಅವರೇ ಹೇಳಿರುವುದರಿಂದ ಈಡಿ ನೋಟಿಸ್ ಗೆ ಸಪರ್ಮಕವಾದ ಉತ್ತರ ನೀಡುವ ಸಾಮರ್ಥ್ಯ ಅವರಲ್ಲಿದೆ ಎಂದು ಹೇಳಿದರು.