ಮಂಡ್ಯ, (ಅಕ್ಟೋಬರ್ 20): ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರು ಭಾನುವಾರದ ಬಾಡೂಟ ಸವಿದಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದ ಹೊಲದಲ್ಲಿ ರೈತ ಮಹಿಳೆಯರ ಜೊತೆ ಕುಳಿತು ನಾಟಿ ಕೋಳಿ ಸಾರು, ರಾಗಿ ಮುದ್ದೆ ಸವಿದರು. ಕಳೆದ ಆಗಸ್ಟ್ 11ರಂದು ಲಕ್ಷ್ಮಣ ಎಂಬುವರ ಜಮೀನಿನಲ್ಲಿ ತಾವು ನಾಟಿ ಮಾಡಿದ್ದ ಭತ್ತವನ್ನು ವೀಕ್ಷಣೆ ಮಾಡಿದರು. ತಾವೇ ನಾಟಿ ಮಾಡಿದ್ದ ಭತ್ತದ ಗದ್ದೆ ವೀಕ್ಷಿಸಿದ ರೈತ ಮಹಿಳೆಯರ ಜೊತೆ ಕುಳಿತು ರಾಗಿ ಮುದ್ದೆ, ನಾಟಿ ಕೋಳಿ ಸೇವಿಸಿದರು. ಅಲ್ಲದೇ ನಾಟಿ ಕೋಳಿ ಸಾಂಬರ್ ರಚಿಯನ್ನೂ ಸಹ ಸವಿದರು.
Published On - 6:03 pm, Sun, 20 October 24