ಜೆಡಿಎಸ್- ಬಿಜೆಪಿ ಮೈತ್ರಿ ಉದ್ದೇಶವನ್ನ ಕೊನೆಗೂ ಬಾಯ್ಬಿಟ್ಟ ಹೆಚ್​ಡಿ ಕುಮಾರಸ್ವಾಮಿ; ಇಲ್ಲಿದೆ ವಿಡಿಯೋ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 01, 2023 | 9:17 PM

ಬಿಜೆಪಿ ಜೊತೆ ಮೈತ್ರಿಗೆ ಜೆಡಿಎಸ್​ನ ಕೆಲವು ನಾಯಕರ ವಿರೋಧ ಹಿನ್ನೆಲೆ ಇಂದು (ಅ.01) ರಾಮನಗರ(Ramanagara) ತಾಲೂಕಿನ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಪಕ್ಷದ ನಾಯಕರ ಜೊತೆ ಮಾಜಿ ಹೆಚ್​.ಡಿ ಸಿಎಂ ಕುಮಾರಸ್ವಾಮಿ(HD Kumaraswamy) ಸಭೆ ಆಯೋಜನೆ ಮಾಡಿದ್ದರು.

ರಾಮನಗರ, ಅ.01: ಬಿಜೆಪಿ ಜೊತೆ ಮೈತ್ರಿಗೆ ಜೆಡಿಎಸ್​ನ ಕೆಲವು ನಾಯಕರ ವಿರೋಧ ಹಿನ್ನೆಲೆ ಇಂದು (ಅ.01) ರಾಮನಗರ(Ramanagara) ತಾಲೂಕಿನ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಪಕ್ಷದ ನಾಯಕರ ಜೊತೆ ಮಾಜಿ ಹೆಚ್​.ಡಿ ಸಿಎಂ ಕುಮಾರಸ್ವಾಮಿ(HD Kumaraswamy) ಸಭೆ ಆಯೋಜನೆ ಮಾಡಿದ್ದರು. ಸಭೆಯ ಬಳಿಕ ಮಾತನಾಡಿದ ಅವರು ‘ನಮ್ಮ ರಾಜ್ಯದಲ್ಲಿ ವರ್ಷಾನುಗಟ್ಟಲೇ ಬಾಕಿ ಇರುವ ನೀರಾವರಿ ಸಮಸ್ಯೆಯಾದ ತುಂಗಭದ್ರಾ, ಕಾವೇರಿ ಹಾಗೂ ಮಹದಾಯಿ ಇರಬಹುದು ಈ ಎಲ್ಲಾ ನೀರಿನ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ತಂದು, ರಾಜ್ಯವನ್ನು ರಕ್ಷಣೆ ಮಾಡಬೇಕು. ಇದು ನನ್ನ ಮೊದಲ ಆಧ್ಯತೆ. ಹೀಗಾಗಿಯೇ ನಮ್ಮ ಪಕ್ಷ ಈ ಮೈತ್ರಿ ನಿರ್ಧಾರಕ್ಕೆ ಬಂದಿದೆ ಎಂದರು. ಇನ್ನು ಈ ಜೆಡಿಎಸ್​ ಸಭೆಯಲ್ಲಿ ಜೆಡಿಎಸ್ ಶಾಸಕರಾದ ಜಿ.ಟಿ.ದೇವೇಗೌಡ, ಕರೆಮ್ಮ ಜಿ.ನಾಯಕ, ಹರೀಶ್ ಗೌಡ, ಸುರೇಶ್ ಬಾಬು, ಸಮೃದ್ಧಿ ಮಂಜುನಾಥ್, ವೆಂಕಟಶಿವಾರೆಡ್ಡಿ, ಶಾರದಾ ಪಿ.ನಾಯ್ಕ್, ಹೆಚ್.ಟಿ.ಮಂಜುನಾಥ್
ಸ್ವರೂಪ್ ಸೇರಿದಂತೆ ಹಲವರು ಸಭೆಯಲ್ಲಿ ಇದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published On - 9:16 pm, Sun, 1 October 23