AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂದಿನ‌ ಆರೇಳು ತಿಂಗಳಲ್ಲಿ ನಿರೀಕ್ಷಿಸದ ತೀರ್ಮಾನಗಳು ಆಗಬಹುದು: ಭವಿಷ್ಯ ನುಡಿದ ಹೆಚ್​ಡಿ ಕುಮಾರಸ್ವಾಮಿ

ಮುಂದಿನ‌ ಆರೇಳು ತಿಂಗಳಲ್ಲಿ ನಿರೀಕ್ಷಿಸದ ತೀರ್ಮಾನಗಳು ಆಗಬಹುದು: ಭವಿಷ್ಯ ನುಡಿದ ಹೆಚ್​ಡಿ ಕುಮಾರಸ್ವಾಮಿ

Anil Kalkere
| Edited By: |

Updated on: Nov 22, 2025 | 8:37 PM

Share

ಮುಂದಿನ ಆರು ಏಳು ತಿಂಗಳಲ್ಲಿ ಕರ್ನಾಟಕದಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳು ನಡೆಯಲಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್​​ಡಿ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್ ಸರ್ಕಾರದ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಜನತೆ ಈಗಾಗಲೇ ಬೇಸತ್ತಿದ್ದು, ಸರ್ಕಾರವನ್ನು ಕಿತ್ತೊಗೆಯಲು ಕಾಯುತ್ತಿದ್ದಾರೆ ಎಂದರು.

ಬೆಂಗಳೂರು, ನವೆಂಬರ್​ 22: ಜೆಡಿಎಸ್​ ಪಕ್ಷಕ್ಕೆ 25 ವರ್ಷ ಹಿನ್ನೆಲೆ ರಜತ ಮಹೋತ್ಸವ ಸಂಭ್ರಮದಲ್ಲಿದೆ. ನಗರದ ಶೇಷಾದ್ರಿಪುರಂನ ಜೆಡಿಎಸ್​ ಕಚೇರಿಯಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ‌ ಕುಮಾರಸ್ವಾಮಿ, 2028ರವರೆಗೆ ಕರ್ನಾಟಕದಲ್ಲಿ ಕಾಂಗ್ರೆಸ್​​​ನವರು ಸಂತಸವಾಗಿರಲಿ. ಈ ಕಾಂಗ್ರೆಸ್​ ಸರ್ಕಾರವನ್ನು ಕಿತ್ತೆಸೆಯಲು ಜನ‌ರು ಕಾಯುತ್ತಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಹಲವು ಬೆಳವಣಿಗೆ ನಡೆಯುತ್ತಿದೆ. ಮುಂದಿನ‌ 6-7 ತಿಂಗಳಲ್ಲಿ ನಿರೀಕ್ಷಿಸದ ತೀರ್ಮಾನಗಳು ಆಗಬಹುದು ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.