ಕೊಪ್ಪಳ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಸೋಮವಾರ ಗಂಗಾವತಿ ಬಳಿಯಿರುವ ಆನೆಗೊಂದಿಗೆ (Anegondi) ಆಗಮಿಸಿದ ಹಿನ್ನೆಲೆಯಲ್ಲಿ ಹೆಲಿಪ್ಯಾಡ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅಲ್ಲಿ ನೆರದಿದ್ದ ಬಿಜೆಪಿ ಕಾರ್ಯಕರ್ತರನ್ನು (BJP workers) ಹೆಲಿಪ್ಯಾಡ್ ನಿಂದ ದೂರ ಹೋಗಿ ಅಂತ ಪೊಲೀಸರು ಹೇಳಿದ್ದಕ್ಕೆ ಆಕ್ರೋಷಗೊಂಡ ಕಾರ್ಯಕರ್ತರು ವಾಗ್ವಾಕ್ಕಿಳಿದರು. ಮಾತಿನ ಚಕಮಕಿ ಜೋರಾದಾಗ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಕಾರ್ಯಕರ್ತರನ್ನು ಸಮಾಧಾನಡಿಸಲು ಯತ್ನಿಸಿದರು.