Bidar: ಧಾರಾಕಾರ ಮಳೆಯಿಂದಾಗಿ ಒಡೆದ ತ್ರಿಪುರಾಂತ ಕೆರೆ; ಜಮೀನುಗಳು ಜಲಾವೃತ
ಬೀದರ್ನ ಬಸವಕಲ್ಯಾಣದಲ್ಲಿ ಧಾರಾಕಾರ ಮಳೆಯಾಗಿದ್ದು, ಐತಿಹಾಸಿಕ ತ್ರಿಪುರಾಂತ ಕೆರೆ ಒಡೆದು ಅವಾಂತರ ಸೃಷ್ಟಿಯಾಗಿದೆ. ಕೆರೆಯ ನೀರು ನುಗ್ಗಿ ಬಸವಕಲ್ಯಾನದ ಜಮೀನುಗಳೆಲ್ಲವೂ ಜಲಾವೃತವಾಗಿವೆ. ಈ ದೃಶ್ಯಾವಳಿಗಳು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಐತಿಹಾಸಿಕ ಕೆರೆಯ ಕೆಳಭಾಗದಲ್ಲಿರುವ ಗಾರ್ಡನ್ ಕೂಡಾ ಸಂಪೂರ್ನವಾಗಿ ಮುಳುಗಿರುವ ದೃಶ್ಯಾವಳಿಗಳು ಕಂಡುಬಂದಿವೆ.
ಬೀದರ್, ಸೆಪ್ಟೆಂಬರ್ 30: ಬಸವಕಲ್ಯಾಣದಲ್ಲಿ ಧಾರಾಕಾರ ಮಳೆಗೆ ಐತಿಹಾಸಿಕ ತ್ರಿಪುರಾಂತ ಕೆರೆ ಒಡೆದು ಅವಾಂತರ ಸೃಷ್ಟಿಯಾಗಿದೆ. ಕೆರೆಯ ನೀರು ನುಗ್ಗಿ ಬಸವಕಲ್ಯಾಣ ಜಮೀನುಗಳು ಜಲಾವೃತವಾಗಿವೆ. ರಸ್ತೆಗಳು ,ಕೆಲವು ಬಡಾವಣೆಗಳು ಜಲಾವೃತವಾಗಿವೆ. ಐತಿಹಾಸಿಕ ಕೆರೆಯ ಕೆಳಭಾಗದಲ್ಲಿರುವ ಗಾರ್ಡನ್ ಕೂಡಾ ಸಂಪೂರ್ಣವಾಗಿ ಮುಳುಗಡೆ. ತ್ರಿಪುರಾಂತ ಕೆರೆ ಒಡೆದು ಜಮೀನುಗಳಿಗೆ ನೀರು ನುಗ್ಗಿರುವ ಎಲ್ಲಾ ದೃಶ್ಯಗಳು ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿವೆ. ವೀಡಿಯೋ ಇಲ್ಲಿದೆ.
Loading...
Unable to load recommendations.
Follow Us