ಮನೆ ಕಟ್ಟಲು ಪಾಯ ಅಗೆಯುವಾಗ… 4 ಶತಮಾನ ಹಳೆಯ ಹಿಂದೂ ವಿಗ್ರಹಗಳು ಪತ್ತೆ! ವಿಡಿಯೊ ನೋಡಿ

ಮನೆ ಕಟ್ಟಲು ಜೆಸಿಬಿಯಿಂದ ಪಾಯ ಅಗೆಯುವಾಗ... 4 ಶತಮಾನಗಳ ಹಳೆಯ ಮೂರು ಹಿಂದೂ ವಿಗ್ರಹಗಳು ಪತ್ತೆಯಾಗಿವೆ. ಈ ಮಧ್ಯೆ ನಿವೇಶನದ ಮಾಲೀಕರಿಗೆ ಚಿನ್ನದ ನಾಣ್ಯಗಳ ಮಡಕೆಯೂ ಸಿಕ್ಕಿದೆ ಎಂಬ ವದಂತಿ ಇದೆ. ವೀಡಿಯೊ ನೋಡಿ

ಮನೆ ಕಟ್ಟಲು ಪಾಯ ಅಗೆಯುವಾಗ... 4 ಶತಮಾನ ಹಳೆಯ ಹಿಂದೂ ವಿಗ್ರಹಗಳು ಪತ್ತೆ! ವಿಡಿಯೊ ನೋಡಿ
|

Updated on: Jun 09, 2024 | 9:37 AM

ಅದು ಹರಿಯಾಣದ ಮಾನೇಸರ್ ಬಳಿಯ ಬಘೂಂಕಿ ಗ್ರಾಮ. ಆ ಊರಿನಲ್ಲಿ ಹಿರಿಯ ವ್ಯಕ್ತಿಯೊಬ್ಬರು ಹೊಸ ಮನೆ ಕಟ್ಟಲು ಬಯಸಿದ್ದರು. ಅದಕ್ಕಾಗಿ.. ಜೆಸಿಬಿ ತರಿಸಿ, ಪಾಯ ಅಗೆಯುತ್ತಿದ್ದರು. ಏಪ್ರಿಲ್ 24 ರಂದು ಹೀಗೆ ಮಣ್ಣನ್ನು ಉತ್ಖನ ಮಾಡುವ ವೇಳೆ ಮೂರು ಕಂಚಿನ ಪ್ರತಿಮೆಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಅವು ಸುಮಾರು 400 ವರ್ಷಗಳಷ್ಟು ಹಳೆಯವು ಎಂದು ಅಂದಾಜಿಸಲಾಗಿದೆ. ಪುರಾತನ ವಿಗ್ರಹಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮತ್ತು ನಿರ್ಮಾಣ ಕಾರ್ಯವನ್ನು ನಿಲ್ಲಿಸುವಂತೆ ಮಾಲೀಕರಿಗೆ ಪೊಲೀಸರು ಸೂಚಿಸಿದ್ದಾರೆ. ಆ ಸ್ಥಳದಲ್ಲಿ ಇನ್ನೂ ಹೆಚ್ಚಿನ ವಿಗ್ರಹಗಳು ಇರಬಹುದೆಂದು ಪರಿಶೀಲಿಸಲು ಪುರಾತತ್ವ ಇಲಾಖೆ ಉತ್ಖನನ ನಡೆಸಲಿದೆ ಎಂದು ತಿಳಿದುಬಂದಿದೆ.

ಹೊಸ ಮನೆಯ ಅಡಿಪಾಯವನ್ನು ಜೆಸಿಬಿ ಯಂತ್ರದಿಂದ ಅಗೆಯುವಾಗ ವಿಗ್ರಹಗಳು ಪತ್ತೆಯಾಗಿರುವುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಮೊದಲಿಗೆ ನಿವೇಶನದ ಮಾಲೀಕರು ವಿಗ್ರಹಗಳ ಬಗ್ಗೆ ಮಾಹಿತಿಯನ್ನು ಮರೆಮಾಚಲು ಪ್ರಯತ್ನಿಸಿದರು. ಈ ವಿಷಯವನ್ನು ಮರೆಮಾಚಲು ಜೆಸಿಬಿ ಚಾಲಕನಿಗೆ ಹಣ ಕೂಡ ನೀಡಿದ್ದಾರೆ. ಆದರೆ ಚಾಲಕ ಎರಡು ದಿನಗಳ ನಂತರ ಬಿಲಾಸ್‌ಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡ ನಿವೇಶನದ ಮಾಲೀಕನ ಮನೆಯನ್ನು ಶೋಧಿಸಿದ್ದಾರೆ. ಮಾಲೀಕನ ಮನೆಯಿಂದ ವಶಪಡಿಸಿಕೊಂಡ ವಿಗ್ರಹಗಳಲ್ಲಿ ನಿಂತ ಭಂಗಿಯಲ್ಲಿರುವ ವಿಷ್ಣು ವಿಗ್ರಹ, ಲಕ್ಷ್ಮಿ ದೇವಿಯ ವಿಗ್ರಹ ಮತ್ತು ಲಕ್ಷ್ಮಿ ಮತ್ತು ವಿಷ್ಣು ದೇವಿಯ ಜಂಟಿ ವಿಗ್ರಹ ಪತ್ತೆಯಾಗಿದೆ ಎಂದು ಅವರು ಹೇಳಿದರು. ಈ ಮಧ್ಯೆ ನಿವೇಶನದ ಮಾಲೀಕರಿಗೆ ಚಿನ್ನದ ನಾಣ್ಯಗಳ ಮಡಕೆಯೂ ಸಿಕ್ಕಿದೆ ಎಂಬ ವದಂತಿ ಇದೆ.

ವಿಡಿಯೋ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow us
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಬರೋಬ್ಬರಿ 111 ಎಸೆತಗಳು... ಕೆಟ್ಟ ರೀತಿಯಲ್ಲಿ ಔಟಾದ ಕೆಎಲ್ ರಾಹುಲ್
ಬರೋಬ್ಬರಿ 111 ಎಸೆತಗಳು... ಕೆಟ್ಟ ರೀತಿಯಲ್ಲಿ ಔಟಾದ ಕೆಎಲ್ ರಾಹುಲ್
‘ಕೆಡಿ’ ಸಿನಿಮಾ ಶೂಟಿಂಗ್ ಸೆಟ್​ನಲ್ಲಿ ಧ್ರುವ ಸರ್ಜಾ ಗಣೇಶೋತ್ಸವ ಆಚರಣೆ
‘ಕೆಡಿ’ ಸಿನಿಮಾ ಶೂಟಿಂಗ್ ಸೆಟ್​ನಲ್ಲಿ ಧ್ರುವ ಸರ್ಜಾ ಗಣೇಶೋತ್ಸವ ಆಚರಣೆ