ಮಿಡಲ್ ಕ್ಲಾಸ್ ಹುಡುಗ UPSC ಪರೀಕ್ಷೆ ಪಾಸ್ ಮಾಡಿದ್ಹೇಗೆ? ಟಿವಿ9 ಜತೆ ಮನದಾಳ ಬಿಚ್ಚಿಟ್ಟ ಟಾಪರ್

Edited By:

Updated on: Mar 10, 2026 | 9:31 AM

ಸಂದೀಪ್ ಬಾಡದ್, ಯಾದಗಿರಿಯ ಮಧ್ಯಮ ವರ್ಗದ ಪ್ರತಿಭೆ, ಯುಪಿಎಸ್‌ಸಿಯಲ್ಲಿ 89ನೇ ರ್ಯಾಂಕ್ ಗಳಿಸಿದ್ದಾರೆ. ಅವರ ಯಶೋಗಾಥೆ, ಸಂದರ್ಶನದ ಅನುಭವಗಳು ಮತ್ತು ಯುವಕರಿಗೆ ಸ್ಪೂರ್ತಿದಾಯಕ ಸಂದೇಶವನ್ನು ಈ ಲೇಖನ ವಿವರಿಸುತ್ತದೆ. ಕನಸು ಕಾಣಿ, ಪ್ರಯತ್ನಿಸಿ, ಯಾವುದು ಅಸಾಧ್ಯವಲ್ಲ ಎಂಬುದು ಅವರ ಮೂಲ ಮಂತ್ರ.

ಯಾದಗಿರಿ, ಮಾರ್ಚ್ 10: ಯಾದಗಿರಿ ಜಿಲ್ಲೆಯ ಪ್ರತಿಭಾವಂತ ಯುವಕ ಸಂದೀಪ್ ಬಾಡದ್ ಅವರು ಪ್ರತಿಷ್ಠಿತ ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ 89ನೇ ರ್ಯಾಂಕ್ ಗಳಿಸಿ, ತಮ್ಮ ಹುಟ್ಟೂರಿಗೆ ಹಾಗೂ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ. ಇದೀಗ ತಮ್ಮ ಯುಪಿಎಸ್ಸಿ ಸಾಧನೆ ಬಗ್ಗೆ ಟಿವಿ9 ಜತೆ ಮುಕ್ತವಾಗಿ ಮಾತನಾಡಿದ್ದಾರೆ. ಪೋಷಕರಿಗೆ ಯುಪಿಎಸ್​​ಸಿ ಬಗ್ಗೆ ಅರಿವೇ ಇರಲಿಲ್ಲ ಎಂದು ಮಧ್ಯಮ ವರ್ಗದ ಕುಟುಂಬದಿಂದ ಬಂದ ಸಂದೀಪ್ ಹೇಳಿದ್ದಾರೆ. ಅಲ್ಲದೆ, ತಮ್ಮ ಯಶಸ್ಸಿನ ಸೀಕ್ರೆಟ್ ತಿಳಿಸಿದ ಅವರು, ಕನಸು ಕಾಣಿ, ಪ್ರಯತ್ನ ಪಟ್ಟರೆ ಯಾವುದು ಅಸಾಧ್ಯವಲ್ಲ ಎಂಬ ಸಂದೇಶ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us