Siddaramaiah Reacts: ಕ್ಷೇತ್ರ ಹುಡುಕಿಕೊಂಡು ಅಲೆಯುತ್ತಿರುವ ಅಲೆಮಾರಿ ಅಂತ ಟೀಕಿಸುತ್ತಿರುವವರಿಗೆ ಬಾದಾಮಿ ಶಾಸಕನ ಉತ್ತರ!

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Jan 18, 2023 | 4:05 PM

ಈ ಬಾರಿ ಬೆಂಗಳೂರಿಗೆ ಹತ್ತಿರದ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದು, ಕೋಲಾರದ ಜನತೆ ಪ್ರೀತಿಯಿಂದ ಆಹ್ವಾನಿಸುತ್ತಿದ್ದಾರೆ ಹೈಕಮಾಂಡ್ ಒಪ್ಪಿದರೆ ಅಲ್ಲಿಂದ ಸ್ಪರ್ಧಿಸುವುದಾಗಿ ವಿರೋಧ ಪಕ್ಷದ ನಾಯಕ ಹೇಳಿದರು.

ಬೆಂಗಳೂರು:  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ತಮ್ಮನ್ನು ಕ್ಷೇತ್ರ ಹುಡುಕಿಕೊಂಡು ಅಲೆದಾಡುತ್ತಿರುವ ಅಲೆಮಾರಿ (nomad) ಟೀಕಿಸುತ್ತಿರುವವರಿಗೆ ಉತ್ತರ ನೀಡಿದ್ದಾರೆ. ಚಾಮುಂಡೇಶ್ವರಿ (Chamundeshwari) ಕ್ಷೇತ್ರದಿಂದ 8 ಬಾರಿ ಸ್ಪರ್ಧಿಸಿರುವ ತಾನು ಅಲೆಮಾರಿಯೇ? ಡಿಲಿಮಿಟೇಶನ್ ಆದಾಗ ತಮ್ಮ ಹುಟ್ಟೂರು ಮತ್ತು ತಾನು ಪ್ರತಿನಿಧಿಸುವ ಹೋಬಳಿ ವರುಣಾ ಕ್ಷೇತ್ರಕ್ಕೆ ಹೋಗಿದ್ದರಿಂದ ಚಾಮುಂಡೇಶ್ವರಿಯಿಂದ ಹೊರಬಂದು ವರುಣಾದಿಂದ ಸ್ಪರ್ಧಿಸಬೇಕಾಯಿತು ಎಂದು ಸಿದ್ದರಾಮಯ್ಯ ಹೇಳಿದರು. ಬಾದಾಮಿ ಕ್ಷೇತ್ರ ಬೆಂಗಳೂರಿನಿಂದ ಬಹಳ ದೂರ ಇರೋದ್ರಿಂದ ಈ ಬಾರಿ ಬೆಂಗಳೂರಿಗೆ ಹತ್ತಿರದ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದು, ಕೋಲಾರದ ಜನತೆ ಪ್ರೀತಿಯಿಂದ ಆಹ್ವಾನಿಸುತ್ತಿದ್ದಾರೆ ಹೈಕಮಾಂಡ್ ಒಪ್ಪಿದರೆ ಅಲ್ಲಿಂದ ಸ್ಪರ್ಧಿಸುವುದಾಗಿ ವಿರೋಧ ಪಕ್ಷದ ನಾಯಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Follow Us
Web contact

TV9 Kannada

Read More