ಬಾಲಕಿಯನ್ನು ಕೊಂದ ಆರೋಪಿ ರಿತೇಶ್ ಕುಮಾರ್ ಎನ್ಕೌಂಟರ್ ನಡೆದ ಸ್ಥಳ ವೀಕ್ಷಿಸಿದ ಪೊಲೀಸ್ ಆಯುಕ್ತ ಶಶಿ ಕುಮಾರ್

Updated on: Apr 14, 2025 | 1:26 PM

ಶರಣಾಗುವಂತೆ ಪೊಲೀಸರು ಎಚ್ಚರಿಸಿದರೂ ಕುಮಾರ್ ಓಡಿ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾನೆ, ಅಗಲೇ ಪಿಎಸ್​ಐ ಅನ್ನಪೂರ್ಣ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಶರಣಾಗು ಅಂತ ಹೇಳಿದ್ದಾರೆ. ಅವನು ಓಟ ಮುಂದುವರಿಸಿದಾಗ ಅನ್ನಪೂರ್ಣ ಪಿಸ್ಟಲ್ ನಿಂದ ಸಿಡಿದ ಮೊದಲ ಗುಂಡು ಅವನ ಕಾಲಿಗೆ ತಾಕಿದೆ ಎರಡನೇಯದ್ದು ಬೆನ್ನಿಗೆ. ಅಸ್ಪತ್ರೆಗೆ ಸಾಗಿಸಿದಾಗ ಅವನು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ.

ಹುಬ್ಬಳ್ಳಿ, ಏಪ್ರಿಲ್ 14: ನಗರದ ವಿಜಯನಗರದಲ್ಲಿ ವಾಸವಾಗಿದ್ದ 5-ವರ್ಷದ ಬಾಲಕಿಯನ್ನು ಅಮಾನುಷವಾಗಿ ಕೊಲೆ ಮಾಡಿದ ಬಿಹಾರ ಮೂಲದ ಆರೋಪಿ ರೀತೇಶ್ ಕುಮಾರ್​ನನ್ನು (Ritesh Kumar) ಪೊಲೀಸರು ಎನ್​ಕೌಂಟರ್ ಮಾಡಿದ ಸ್ಥಳವನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಶನರ್ ಎನ್ ಶಶಿಕುಮಾರ್ ತಮ್ಮ ಕೆಲ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ವೀಕ್ಷಿಸಿದರು. ಪೊಲೀಸರು ಕುಮಾರ್​​ನನ್ನು ವಶಕ್ಕೆ ಪಡೆದು ಅವನು ವಾಸ ಮಾಡುತ್ತಿದ್ದ ಸ್ಥಳಕ್ಕೆ ಮಹಜರ್ ಗೆ ಕರೆದೊಯ್ದಾಗ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಕಲ್ಲೆಸೆದು ಅವನು ಕಾರನ್ನು ಜಖಂಗೊಳಿಸಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.

ಇದನ್ನೂ ಓದಿ:  ಹೊರ ರಾಜ್ಯಗಳಿಂದ ಬಂದವರಿಂದಲೇ ಹೆಚ್ಚು ಅಪರಾಧ ಕೃತ್ಯಗಳು: ಗೃಹ ಸಚಿವ ಜಿ ಪರಮೇಶ್ವರ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ