‘ಬಿಗ್ ಬಾಸ್​ಗೆ ಬರೋಕೆ ಇನ್ನೊಂದು ಅವಕಾಶ ಕೊಡಿ ’; ಸುದೀಪ್ ಬಳಿ ಮನವಿ ಮಾಡಿದ ಹುಚ್ಚ ವೆಂಕಟ್

| Updated By: ರಾಜೇಶ್ ದುಗ್ಗುಮನೆ

Updated on: Sep 27, 2024 | 12:20 PM

‘ಬಿಗ್ ಬಾಸ್ ಕನ್ನಡ ಸೀಸನ್ 11’ ಸೆಪ್ಟೆಂಬರ್ 29ರಿಂದ ಆರಂಭ ಆಗಲಿದೆ. ಈಗಾಗಲೇ ಸ್ಪರ್ಧಿಗಳ ಹೆಸರು ಕೂಡ ಫೈನಲ್ ಆಗಿದೆ. ಈ ಮಧ್ಯೆ ಹುಚ್ಚ ವೆಂಕಟ್ ಅವರು ಒಂದು ಮನವಿ ಮಾಡಿದ್ದಾರೆ. ಈ ಕುರಿತು ವಿಡಿಯೋ ಒಂದನ್ನು ಮಾಡಿ ಹರಿಬಿಟ್ಟಿದ್ದಾರೆ.

ನಟ ಹುಚ್ಚ ವೆಂಕಟ್ ಅವರು ಬಿಗ್ ಬಾಸ್​ಗೆ ಬಂದು ಕಿರಿಕ್ ಮಾಡಿಕೊಂಡಿದ್ದರು. ಸಹ ಸ್ಪರ್ಧಿಯ ಮೇಲೆ ಕೈ ಮಾಡಿ ಅವರು ಮನೆಯಿಂದ ಹೊರಕ್ಕೆ ಹೊಗಿದ್ದರು. ಆ ಬಳಿಕ ವೆಂಕಟ್ ಅವರು ಊರೂರು ಅಲೆದಿದ್ದರು. ಅವರಿಗೆ ಮಾನಸಿಕ ಚಿಕಿತ್ಸೆಯ ಅವಕಾಶ ಇದೆ ಎಂದು ಎಲ್ಲರೂ ಹೇಳಿದ್ದರು. ಈಗ ಅವರು ವಿಡಿಯೋ ಒಂದನ್ನು ಮಾಡಿ ಹರಿಬಿಟ್ಟಿದ್ದಾರೆ. ‘ನನಗೆ ಮತ್ತೊಂದು ಅವಕಾಶ ಕೊಡಿ. ಕೊಡುವ ಎಲ್ಲಾ ಟಾಸ್ಕ್​ಗಳನ್ನು ಮಾಡುತ್ತೇನೆ’ ಎಂದಿದ್ದಾರೆ ಹುಚ್ಚ ವೆಂಕಟ್. ಆ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on