ನಾನಂತೂ ಧ್ರುವನಾರಾಯಣ ಮಗನ ಪರ ವಾದಿಸುವ ವಕೀಲ, ಜಡ್ಜ್ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ: ಡಿಕೆ ಶಿವಕುಮಾರ್

Arun Kumar Belly

|

Updated on:Mar 14, 2023 | 7:05 PM

ಅವತ್ತು ಮೈಸೂರಿಗೆ ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್ ಮತ್ತು ರಂದೀಪ್ ಸಿಂಗ್ ಸುರ್ಜೆವಾಲಾ ಕೂಡ ಬಂದಿದ್ದರು ಎಂದು ಹೇಳಿದ ಶಿವಕುಮಾರ್, ಖರ್ಗೆ ಸಾಹೇಬರು ಜಡ್ಜ್ ಸ್ಥಾನದಲ್ಲಿದ್ದಾರೆ, ತಾವು ಧ್ರುವನಾರಾಯಣ ಮಗನ ಪರ ವಾದಿಸುವ ವಕೀಲ ಎಂದರು.

ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಇಂದು ನಗರದಲ್ಲಿ ಓಡಾಡಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದ ಅವರು ಕಳೆದ ವಾರ ನಿಧನರಾದ ಕಾಂಗ್ರೆಸ್ ಮುಖಂಡ ಅರ್ ಧ್ರುವನಾರಾಯಣ (R Dhruvanarayana) ಮಗನಿಗೆ ಟಿಕೆಟ್ ನೀಡುವ ನಿರ್ಧಾರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ಅವತ್ತು ಮೈಸೂರಿಗೆ ಖರ್ಗೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮತ್ತು ರಂದೀಪ್ ಸಿಂಗ್ ಸುರ್ಜೆವಾಲಾ ಕೂಡ ಬಂದಿದ್ದರು ಎಂದು ಹೇಳಿದ ಶಿವಕುಮಾರ್, ಖರ್ಗೆ ಸಾಹೇಬರು ಜಡ್ಜ್ ಸ್ಥಾನದಲ್ಲಿದ್ದಾರೆ, ತಾವು ಧ್ರುವನಾರಾಯಣ ಮಗನ ಪರ ವಾದಿಸುವ ವಕೀಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

 

Follow us on

Click on your DTH Provider to Add TV9 Kannada