ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ವಾಪಸ್ಸು ಹೋಗಲು ನಂಗೇನು ಹುಚ್ಚಾ? ಲಕ್ಷ್ಮಣ ಸವದಿ, ಅಥಣಿ ಶಾಸಕ

Updated on: Feb 06, 2024 | 5:38 PM

ಬಿಜೆಪಿಯಲ್ಲಿ ಅವಮಾನಕ್ಕೀಡಾಗಿ ನೋವು ಅನುಭವಿಸುತ್ತಿದ್ದ ಕಷ್ಟದ ಸಮಯದಲ್ಲಿ ಕಾಂಗ್ರೆಸ್ ಪಕ್ಷ ತನಗೆ ಆಶ್ರಯ ನೀಡಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಚಿವ ಸಂಪುಟದ ಎಲ್ಲ ಸದಸ್ಯರು ತಮ್ಮನ್ನು ಗೌರವಯುತವಾಗಿ ನಡೆಸಿಕೊಂಡಿದ್ದಾರೆ, ವಾಸ್ತವತೆ ಹೀಗಿರುವಾಗ ಬಿಜೆಪಿಗೆ ವಾಪಸ್ಸು ಹೋಗಲು ತನಗೇನು ಹುಚ್ಚಾ ಎಂದು ಸವದಿ ಹೇಳಿದರು.

ದೆಹಲಿ: ಲಕ್ಷ್ಮಣ ಸವದಿ (Laxman Savadi) ಅವರ ಡಿಎನ್ ಎ ಬಿಜೆಪಿ ಜೊತೆ ಮ್ಯಾಚ್ ಆಗುತ್ತೆ ಅವರ ಮೈಯಲ್ಲಿ ಬಿಜೆಪಿ ರಕ್ತ ಹರಿಯುತ್ತಿದೆ, ಜಗದೀಶ್ ಶೆಟ್ಟರ್ (Jagadish Shettar) ಹಾಗೆ ಬಿಜೆಪಿಗೆ ಬರೋದು ಗ್ಯಾರಂಟಿ ಅಂತ ಬಿಜೆಪಿ ನಾಯಕರು (BJP leaders) ಹೇಳುತ್ತಿದ್ದಾರೆ ಅಂತ ದೆಹಲಿಯ ಟಿವಿ9 ವರದಿಗಾರ ಅಥಣಿ ಶಾಸಕನಿಗೆ ಹೇಳಿದಾಗ ಅವರು ಕೆಂಡಾಮಂಡಲರಾದರು. ನಾನು ನಮ್ಮಪ್ಪನಿಗೆ ಹುಟ್ಟಿದ್ದು ಮತ್ತು ನನ್ನ ಮೈಯಲ್ಲಿ ನಮ್ಮಪ್ಪನ ರಕ್ತ ಹರಿಯುತ್ತಿದೆ, ಬೇರೆಯವರ ಡಿಎನ್ ತೆಗೆದುಕೊಂಡು ಏನ್ ಮಾಡ್ಲಿ ಎಂದು ಕಿಡಿ ಕಾರಿದರು. ಶೆಟ್ಟರ್ ವಾಪಸ್ಸು ಹೋಗಿದ್ದಾರೆ ಅಂತ ಎಲ್ಲ ಅವರ ದಾರಿ ತುಳಿಯಬೇಕಾ? ಅವರಿಗಿಂತ ಮೊದಲು ತಾನು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದು, ಅಮೇಲೆ ಅವರು ಬಂದು ವಾಪಸ್ಸು ಕೂಡ ಹೋದರು, ಅವರ ಹಾಗೆ ತಾನು ಮಾಡಬೇಕಿಲ್ಲ ಎಂದು ಸವದಿ ಹೇಳಿದರು. ಬಿಜೆಪಿಯಲ್ಲಿ ಅವಮಾನಕ್ಕೀಡಾಗಿ ನೋವು ಅನುಭವಿಸುತ್ತಿದ್ದ ಕಷ್ಟದ ಸಮಯದಲ್ಲಿ ಕಾಂಗ್ರೆಸ್ ಪಕ್ಷ ತನಗೆ ಆಶ್ರಯ ನೀಡಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಚಿವ ಸಂಪುಟದ ಎಲ್ಲ ಸದಸ್ಯರು ತಮ್ಮನ್ನು ಗೌರವಯುತವಾಗಿ ನಡೆಸಿಕೊಂಡಿದ್ದಾರೆ, ವಾಸ್ತವತೆ ಹೀಗಿರುವಾಗ ಬಿಜೆಪಿಗೆ ವಾಪಸ್ಸು ಹೋಗಲು ತನಗೇನು ಹುಚ್ಚಾ ಎಂದು ಸವದಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More