ದರ್ಶನ್ ಜೈಲಿನಲ್ಲಿದ್ದಾರೋ ಇಲ್ವೊ ಎಂಬ ಭಾವನೆ ಬರ್ತಿದೆ: ರೇಣುಕಾಸ್ವಾಮಿ ತಂದೆ ಬೇಸರ
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಎ2 ಆಗಿ ಜೈಲು ಸೇರಿರುವ ದರ್ಶನ್ ಕೂಡ ಇದೇ ಕಾರಾಗೃಹದಲ್ಲಿದ್ದಾರೆ. ಇದೀಗ ದರ್ಶನ್ ಜೈಲಿನಲ್ಲಿ ಕಾಫಿ, ಸಿಗರೇಟ್ ಸೇದುತ್ತಿರುವ ಫೋಟೋ ವೈರಲ್ ಆಗಿದೆ. ಫೋಟೋ ನೋಡಿದ ಮೃತ ರೇಣುಕಾಸ್ವಾಮಿ ಕುಟುಂಬ, ಜೈಲಧಿಕಾರಿಗಳ ವಿರುದ್ಧ ಕಿಡಿಕಾರಿದೆ. ಸಿಬಿಐಗೆ ವಹಿಸಬೇಕು ಅಂತಾ ಒತ್ತಾಯಿಸಿದ್ದಾರೆ.
ಚಿತ್ರದುರ್ಗ, ಆಗಸ್ಟ್ 25: ಫೋಟೋ ವೈರಲ್ ಆದ ಬೆನ್ನಲ್ಲೇ ಇದೀಗ ಜೈಲಿನಲ್ಲಿ ಸಹ ಕೈದಿಯ ಮೊಬೈಲ್ನಲ್ಲಿ ನಟ ದರ್ಶನ್ (Darshan) ವಿಡಿಯೋ ಕಾಲ್ ವೈರಲ್ ಆಗಿದೆ. ಈ ವಿಚಾರವಾಗಿ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ್ರು ಬೇಸರ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೀಗಾದರೆ ಪ್ರಕರಣ ಸಿಬಿಐಗೆ ವಹಿಸಿಬೇಕೆಂದು ಅನಿಸುತ್ತಿದೆ. ದರ್ಶನ್ ಜೈಲಿನಲ್ಲಿದ್ದಾರೋ ಇಲ್ವೊ ಎಂಬ ಭಾವನೆ ಬರ್ತಿದೆ. ದರ್ಶನ್ ಸಹ ಸಾಮಾನ್ಯ ಕೈದಿಯಂತೆಯೇ ಇರಬೇಕು. ಆದರೆ ರೆಸಾರ್ಟ್ನಲ್ಲಿರುವಂತೆ ಕಂಡು ಶಾಕ್ ಆಯ್ತು. ದರ್ಶನ್ಗೆ ಸಿಗರೇಟ್ ನೀಡಿದವರಿಗೆ ಶಿಕ್ಷೆ ಆಗಬೇಕು. ಮುಖ್ಯಮಂತ್ರಿ, ಗೃಹಸಚಿವರು ಈ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us