ಮರ್ಯಾದೆಯಿಲ್ಲದೆ ಸಚಿವ ಸ್ಥಾನಗಳಲ್ಲಿ ಕುಳಿತಿರುವವರು ರಾಜ್ಯ ಲೂಟಿ ಮಾಡಲು ಅನುಕೂಲವಾಗಲಿ ಅಂತ ವಿದೇಶಕ್ಕೆ ಹೋಗಿದ್ದೆ: ಹೆಚ್ ಡಿ ಕುಮಾರಸ್ವಾಮಿ
ಕೌಲಾಲಂಪುರದಿಂದ ವಿಮಾನವೊಂದರಲ್ಲಿ ಅವರು ಕೆಐಎ ಏರ್ಪೋರ್ಟ್ ನಲ್ಲಿ ಬಂದಿಳಿದರೂ ಮಲೇಶಿಯಾಗೆ ಹೋಗಿರಲಿಲ್ಲ, ಕಾಂಬೋಡಿಯಗೆ ಹೋಗಿದ್ದು ಅವರು ಸುದ್ದಿಗಾರರಿಗೆ ಹೇಳಿದರು. ಕಳೆದ ವಾರವಷ್ಟೇ ಅವರು ಕುಟುಂಬದೊಂದಿಗೆ ವಿದೇಶ ಯುರೋಪ್ ಪ್ರವಾಸ ತೆರಳಿ ಹಿಂತಿರುಗಿದ್ದರು.
ಬೆಂಗಳೂರು: ಜೆಡಿಎಎಸ್ ಶಾಸಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತೊಂದು ವಿದೇಶ ಪ್ರವಾಸ ಮುಗಿಸಿಕೊಂಡು ಕಳೆದ ರಾತ್ರಿ ರಾಜ್ಯ ರಾಜಧಾನಿಗೆ ವಾಪಸ್ಸಾದರು. ಕೌಲಾಲಂಪುರದಿಂದ (Kuala Lumpur) ವಿಮಾನವೊಂದರಲ್ಲಿ ಅವರು ಕೆಐಎ ಏರ್ಪೋರ್ಟ್ ನಲ್ಲಿ ಬಂದಿಳಿದರೂ ಮಲೇಶಿಯಾಗೆ ಹೋಗಿರಲಿಲ್ಲ, ಕಾಂಬೋಡಿಯಗೆ (Cambodia) ಹೋಗಿದ್ದು ಅವರು ಸುದ್ದಿಗಾರರಿಗೆ ಹೇಳಿದರು. ಹೋದ ಕಾರಣದ ಬಗ್ಗೆ ಕೇಳಿದಾಗ ನೇರವಾಗಿ ಉತ್ತರ ಹೇಳುವ ಬದಲು ಅವರು, ಮಂತ್ರಿಸ್ಥಾನಗಳಲ್ಲಿ ಮಾನ ಮರ್ಯಾದೆ ಇಲ್ಲದೆ ಕುಳಿತಿರುವ ಕೆಲವರು ಕುಮಾರಸ್ವಾಮಿ ವಿದೇಶದಲ್ಲೇ ಇರಲಿ, ಅದಕ್ಕಾಗಿ ಎಲ್ಲ ವ್ಯವಸ್ಥೆ ಮಾಡಿಕೊಡ್ತೀವಿ ಅಂತ ಹೇಳಿದ್ದಾರಲ್ಲ? ಅವರು ರಾಜ್ಯವನ್ನು ಕೊಳ್ಳೆ ಹೊಡೆಯಲು ಅನುಕೂಲವಾಗಲಿ ಅಂತ ರಾಜ್ಯ ಸರ್ಕಾರದ ಮೇಲೆ ಚಾಟಿ ಬೀಸಿದರು. ಮುಂದುವರಿದು ಮಾತಾಡಿದ ಕುಮಾರಸ್ವಾಮಿ, ಪಕ್ಷದ ಸಂಘಟನೆಗಾಗಿ ಕಳೆದ 12 ವರ್ಷಗಳಿಂದ ಓಡಾಡುತ್ತಿದ್ದೇನೆ, ಅದೇ ಕಾರಣಕ್ಕೆ ವಿದೇಶಗಳಲ್ಲಿರುವ ಕೆಲ ಸ್ನೇಹಿತರನ್ನು ಭೇಟಿ ಮಾಡಲು ಹೋಗಿದ್ದಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಆರ್ಎಸ್ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್ ನಾಯಕ ಪೊಲೀಸ್ ವಶ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ನಾನ್ ವೆಜ್ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್!
