ಬಿಗ್ ಬಾಸ್ ಸೀಸನ್ 11 ಹನುಮಂತನೇ ಗೆಲ್ಲಲಿ ಅಂತ ನಾನಂದುಕೊಂಡಿದ್ದೆ: ತುಕಾಲಿ ಸಂತೋಷ್

ಅರುಣ್​ ಕುಮಾರ್​ ಬೆಳ್ಳಿ

Updated on: Jan 30, 2025 | 7:36 PM

ಬಿಗ್ ಬಾಸ್ ಸೀಸನ್ 11ರಲ್ಲಿ ಹನುಮಂತನೇ ಗೆಲ್ಲಬೇಕೆಂದು ತುಕಾಲಿ ಸಂತೋಷ್ ಅಂದುಕೊಂಡಿದ್ದರಂತೆ, ಅದರೆ ಅವರ ಪತ್ನಿ ಮಾನಸ ಅವರಿಗೆ ತ್ರಿವಿಕ್ರಮ ಗೆಲ್ಲಬೇಕೆಂಬ ಅಸೆ ಇತ್ತಂತೆ, ಯಾರು ಗೆದ್ದರೇನಂತೆ? ಗೆದ್ದವರು ನಮಗೆ ದುಡ್ಡು ಕೊಡುತ್ತಾರಾ ಅಂತ ತುಕಾಲಿ ಹೇಳುತ್ತಾರೆ. ಯಾಕೆ ಕೊಡ್ತಾರೆ ಸ್ವಾಮಿ? ನೀವಾಗಲಿ, ಮಾನಸವಾಗಲೀ ಗೆದ್ದಿದ್ದರೆ ಪ್ರೈಜ್ ಮನೀಯನ್ನು ಹಂಚುತ್ತಿದ್ರಾ?

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಕಾಂಟೆಸ್ಟಂಟ್ ಆಗಿದ್ದ ನಟ ತುಕಾಲಿ ಸಂತೋಷ್ ಇತ್ತೀಚಿನ ದಿನಗಳಲ್ಲಿ ಬಹಳ ಬ್ಯುಸಿಯಾಗಿದ್ದಾರೆ, ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಮತ್ತು ಟಿವಿಗಳ ರಿಯಾಲಿಟಿ ಶೋನಲ್ಲೂ ಭಾಗವಹಿಸುತ್ತಿದ್ದಾರೆ. ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿರುವ ಅವರು ಬಿಗ್ ಬಾಸ್ 11 ವಿನ್ನರ್ ಹನುಮಂತನ ಜೊತೆ ಅತ್ಮೀಯ ಒಡನಾಟ ಹೊಂದಿದ್ದಾರೆ. ಪತ್ನಿ ಮಾನಸ, ಹನುಮಂತ ಮತ್ತು ತುಕಾಲಿ ಸಂತೋಷ್ ಜೊತೆಯಾಗಿ ಕೆಲಸ ಮಾಡಿದ್ದಾರಂತೆ. ತುಕಾಲಿ ನಟಿಸಿರುವ ಗಜರಾಮ ಬಿಡುಗಡೆ ಆಗೋದ್ರಲ್ಲಿದೆ ಮತ್ತು ಸುಗ್ಗೀಭವ ರಿಲೀಸ್​ಗೆ ರೆಡಿಯಾಗಿದೆ, ರಿಯಾಲಿಟಿ ಶೋ ಮಜಾ ಟಾಕೀಸ್​ನಲ್ಲೂ ಅವರು ಅವಕಾಶ ಗಿಟ್ಟಿಸಿದ್ದಾರೆ, ಹಾಗಾಗಿ ಫುಲ್ ಬ್ಯುಸಿ ಮಾರಾಯ್ರೇ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:

Published on: Jan 30, 2025 07:36 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.