ಬಿಗ್ಬಾಸ್ ಗೆದ್ದು ಬಂದ ಹನುಮಂತನಿಗೆ ಊರವರಿಂದ ಭರ್ಜರಿ ಸ್ವಾಗತ
Bigg Boss Kannada season 11: ಬಿಗ್ಬಾಸ್ ಕನ್ನಡ ಸೀಸನ್ 11 ರಿಯಾಲಿಟಿ ಶೋನಲ್ಲಿ ಹನುಮಂತು ವಿಜೇತರಾಗಿದ್ದಾರೆ. ಮೊದಲ ರನ್ನರ್ ಅಪ್ಗಿಂತಲೂ ಕೋಟ್ಯಂತರ ಮತಗಳ ಅಂತರದಲ್ಲಿ ಹನುಮಂತು ಜಯ ಗಳಿಸಿದ್ದಾರೆ. ಬಿಗ್ಬಾಸ್ ಗೆದ್ದ ಹನುಮಂತನಿಗೆ ಅವರ ಸ್ವಂತ ಊರಲ್ಲಿ ಭಾರಿ ಸ್ವಾಗತ ಕೋರಲಾಗಿದೆ. ಹನುಮಂತ ಸಹ ಊರ ಜನರಿಗೆ ಬಿಗ್ಬಾಸ್ ಟ್ರೋಫಿ ತೋರಿಸಿ ಖುಷಿ ಪಟ್ಟಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 11 ರಿಯಾಲಿಟಿ ಶೋ ಅನ್ನು ಹನುಮಂತು ಗೆದ್ದಿದ್ದಾರೆ. ಅವರ ಮುಗ್ಧತೆ, ಜಾಣ್ಮೆಯಿಂದ ಆಡಿದ ಪರಿ ಜನರಿಗೆ ಇಷ್ಟವಾಗಿದೆ. ಹನುಮಂತನ ಗ್ರಾಮ್ಯ ಹಿನ್ನೆಲೆ, ಆತನ ಗ್ರಾಮ್ಯ ವರ್ತನೆ ಹಲವರಿಗೆ ಮೆಚ್ಚುಗೆ ಆಗಿತ್ತು. ಇದೀಗ ಬಿಗ್ಬಾಸ್ ಗೆದ್ದಿರುವ ಹನುಮಂತು ಊರಿಗೆ ವಾಪಸ್ ಆಗಿದ್ದು, ಹನುಮಂತನಿಗೆ ಭಾರಿ ಸ್ವಾಗತವನ್ನು ಊರ ಜನ ನೀಡಿದ್ದಾರೆ. ಹನುಮಂತನ ಮೆರವಣಿಗೆ ಮಾಡುವ ಜೊತೆಗೆ ಸ್ಥಳೀಯ ಸಂಘ ಸಂಸ್ಥೆಗಳು ಹನುಮಂತನಿಗೆ ವಿಶೇಷ ಸನ್ಮಾನವನ್ನು ಸಹ ಮಾಡಿವೆ. ಹನುಮಂತ ಸಹ ತನ್ನ ಬಿಗ್ಬಾಸ್ ಟ್ರೋಫಿಯನ್ನು ತನ್ನೂರಿನ ಜನರಿಗೆ ತೋರಿಸಿ ಖುಷಿ ಪಟ್ಟಿದ್ದಾರೆ ಇಲ್ಲಿದೆ ನೋಡಿ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jan 30, 2025 08:18 PM
Latest Videos

ಬೆಂಗಳೂರಿನಲ್ಲಿ ಮಾನಸಿಕ ಅಸ್ವಸ್ಥನಂತೆ ವರ್ತಿಸಿ ವ್ಯಕ್ತಿಯಿಂದ ಹುಚ್ಚಾಟ

ಚಾಮುಂಡಿ ಬೆಟ್ಟದ ಬೆಂಕಿ ಹತೋಟಿಗೆ ಸಿಗುತ್ತಿಲ್ಲ..ಅಗ್ನಿ ನರ್ತನ ಹೇಗಿದೆ ನೋಡಿ

ಛತ್ರಪತಿ ಸಂಭಾಜಿ ಜೀವನಾಧರಿತ ಛಾವಾ ಸಿನಿಮಾಗೆ ಮೋದಿಯಿಂದಲೂ ಭಾರೀ ಮೆಚ್ಚುಗೆ

ಅಪ್ಪ ಇದ್ದಿದ್ರೆ ಹೆಮ್ಮೆಪಡುತ್ತಿದ್ರು: ಕಾಶಿನಾಥ್ ಮಗನಿಗೆ ಉಪೇಂದ್ರ ಹೊಗಳಿಕೆ
