ಕುಮಾರಸ್ವಾಮಿ ಹಠ ಮಾಡದಿದ್ದರೆ ಯೋಗೇಶ್ವರ್ ಪಕ್ಷಬಿಟ್ಟು ಹೋಗುತ್ತಿರಲಿಲ್ಲ: ಪ್ರೀತಂ ಗೌಡ
ಯೋಗೇಶ್ವರ್ ಇಲ್ಲದ ಕಾರಣ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಎನ್ಡಿಎ ಗೆಲ್ಲಲಾರದು ಅಂತೇನಿಲ್ಲ, ಆದರೆ ಕುಮಾರಸ್ವಾಮಿಯರು ಮುಂಚೂಣಿಯಲ್ಲಿದ್ದು ಎನ್ಡಿಎ ಅಭ್ಯರ್ಥಿಯನ್ನು ಗೆಲ್ಲಿಸಬೇಕು, ಯಾಕೆಂದರೆ ಅದು ಅವರು ಪ್ರತಿನಿಧಿಸಿದ ಕ್ಷೇತ್ರ, ಅವರಿಗೆ ಶಕ್ತಿ ತುಂಬಲು ಬಿಜೆಪಿ ನಾಯಕರು ಬದ್ಧರಾಗಿದ್ದಾರೆ ಎಂದು ಪ್ರೀತಂ ಗೌಡ ಹೇಳಿದರು.
ಬೆಂಗಳೂರು: ಸಿಪಿ ಯೋಗೇಶ್ವರ್ ಬಿಜೆಪಿಯನ್ನು ಬಿಟ್ಟು ಹೋಗುವಂತಾಗಿದ್ದಕ್ಕೆ ಪಕ್ಷದ ನಾಯಕರು ಹೆಚ್ ಡಿ ಕುಮಾರಸ್ವಾಮಿಯನ್ನು ದೂರುವುದು ಶುರುವಾಗಿದೆ. ಪ್ರಸ್ತುತ ಸ್ಥಿತಿ ಯಾಕೆ ನಿರ್ಮಾಣವಾಯಿತು ಅಂತ ಪರಾಮರ್ಶೆ ಮಾಡಬೇಕಿದೆ, ಯೋಗೇಶ್ವರ್ ಪಕ್ಷ ಬಿಟ್ಟುಹೋಗಿರುವುದಕ್ಕೆ ಅವರು ಸರಿಯಿರಲಿಲ್ಲ ಅನ್ನೋದು ಸರಿಯಲ್ಲ, ಚನ್ನಪಟ್ಟಣದಲ್ಲಿ ಅವರು ಗೆಲ್ಲುವ ಅಭ್ಯರ್ಥಿಯಾಗಿದ್ದರು ಮತ್ತು ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬಲಾಢ್ಯವಾಗಿ ಬೆಳೆಯಬೇಕು ಅಂತ ಅಂದುಕೊಂಡವರಲ್ಲಿ ಅವರು ಕೂಡ ಒಬ್ಬರಾಗಿದ್ದರು ಎಂದು ಮಾಜಿ ಶಾಸಕ ಮತ್ತು ಬಿಜೆಪಿ ನಾಯಕ ಪ್ರೀತಂ ಜೆ ಗೌಡ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಯೋಗೇಶ್ವರ್ ಒಬ್ಬ ಫ್ರಾಡ್, ಸೈನಿಕ ಅಂತ ಕರೆಯೋದು ಆ ಸಮುದಾಯಕ್ಕೆ ಅವಮಾನ: ಹೆಚ್ ವಿಶ್ವನಾಥ್
Loading...
Unable to load recommendations.
Follow Us
