ಬೆಂಗಳೂರು: ATMನಲ್ಲಿ ಹಣ ಡ್ರಾ ಮಾಡಲು ಸಹಾಯ ಕೇಳುವಾಗ ಎಚ್ಚರ! ಮಾಯವಾಗುತ್ತೆ ನಿಮ್ಮ​ ಹಣ

|

Updated on: Aug 06, 2024 | 4:29 PM

ಬೆಂಗಳೂರಿನಲ್ಲಿ ಜನರಿಗೆ ಸಹಾಯ ಮಾಡುವ ನೆಪದಲ್ಲಿ ವಂಚನೆ ಮಾಡುವ ಗ್ಯಾಂಗ್​ವೊಂದು ಅಲರ್ಟ್​ ಆಗಿದ್ದು, ಕ್ಷಣ ಮಾತ್ರದಲ್ಲಿ ನಿಮ್ಮ ಎಟಿಎಂ ಕಾರ್ಡ್ ಬದಲಾಯಿಸಿಕೊಂಡು ನಿಮ್ಮ ಖಾತೆಯಲ್ಲಿರುವ ಹಣವನ್ನು ಎಗರಿಸುತ್ತಾರೆ. ಇದೀಗ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಿಹಾರ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರು, ಆ.06: ಎಟಿಎಂ ಸೆಂಟರ್​ಗಳನ್ನೆ ಟಾರ್ಗೆಟ್ ಮಾಡಿಕೊಂಡು ಬೆಂಗಳೂರಿನಲ್ಲಿ ಜನರಿಗೆ ಸಹಾಯ ಮಾಡುವ ನೆಪದಲ್ಲಿ ವಂಚನೆ ಮಾಡುವ ಗ್ಯಾಂಗ್​ವೊಂದು ಆ್ಯಕ್ಟೀವ್​​ ಆಗಿದೆ. ಕ್ಷಣ ಮಾತ್ರದಲ್ಲಿ ನಿಮ್ಮ ಎಟಿಎಂ ಕಾರ್ಡ್ ಬದಲಾಯಿಸಿಕೊಂಡು ನಿಮಗೆ ಮೋಸ ಮಾಡುತ್ತಾರೆ. ಹೌದು, ಉತ್ತರಹಳ್ಳಿಯ ಕೆನರಾ ಬ್ಯಾಂಕ್​ಗೆ ಸಂಜಯ್ ಕುಮಾರ್ ಎಂಬಾತ ಒಂದೂವರೆ ಲಕ್ಷ ಹಣ ಡೆಪಾಸಿಟ್ ಮಾಡಿದ್ದ. ಅದರಂತೆ ಎಟಿಎಂ ಪಿನ್ ಚೇಂಜ್ ಮಾಡಲು ಪಕ್ಕದಲ್ಲೇ ಇದ್ದ ಎಟಿಎಂ ಗೆ ತೆರಳಿದ್ದಾನೆ. ಈ ವೇಳೆ ಪಿನ್ ಚೇಂಜ್ ಮಾಡಲು ಬರದಿದ್ದಾಗ ಅಲ್ಲೇ ಇದ್ದ ಇಬ್ಬರು ವ್ಯಕ್ತಿಗಳ ಸಹಾಯ ಕೇಳಿದ್ದ. ಅವರಿಗೆ ಎಟಿಎಂ ಕಾರ್ಡ್ ಕೊಟ್ಟು ಪಿನ್ ನಂಬರ್ ಅನ್ನು ಹೇಳಿದ್ದಾನೆ.

ಈ ವೇಳೆ ಕಾರ್ಡ್ ಬದಲಾಯಿಸಿಕೊಂಡು ಪಕ್ಕದಲ್ಲೇ ಇದ್ದ ಎಟಿಎಂ ನಿಂದ 75 ಸಾವಿರ ಹಣ ಡ್ರಾ ಮಾಡಿಕೊಂಡು ವಂಚಿಸಿದ್ದು, ಈ ಬಗ್ಗೆ ಖಾತೆದಾರನಿಗೆ ಮೆಸೇಜ್​ಗಳು ಬಂದಿದೆ. ಕೂಡಲೇ ಘಟನೆ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ಹಣ ಕಳೆದುಕೊಂಡ ಸಂಜಯ್ ದೂರು ನೀಡಿದ್ದಾರೆ. ಸದ್ಯ ಬಿಹಾರ ಮೂಲದ ಇಬ್ಬರು ಆರೋಪಿಗಳನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದು, ವಿವೇಕ್ ಕುಮಾರ್(28),ಚುನಿ ಲಾಲ್ ಕುಮಾರ್ ಎಂದು ತಿಳಿದುಬಂದಿದೆ. ಈ ಬಂಧಿತರಿಂದ ಪೊಲೀಸರು, ವಿವಿಧ ಬ್ಯಾಂಕ್​ನ 37 ಎಟಿಎಂ ಕಾರ್ಡ್ ಹಾಗೂ 75 ಸಾವಿರ ಹಣ ವಶಕ್ಕೆ ಪಡೆದಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:27 pm, Tue, 6 August 24

Follow us on