ಚಿತ್ರದುರ್ಗ, ಸೆ.05: ಯುವಕನೊಬ್ಬ ಪೆಟ್ರೋಲ್ ಸುರಿದು ತಹಶೀಲ್ದಾರ್(Tahsildar) ಜೀಪ್ಗೆ ಬೆಂಕಿಯಿಟ್ಟ ಘಟನೆ ಚಳ್ಳಕೆರೆ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ತಾಲೂಕು ಕಚೇರಿ ಬಳಿ ನಡೆದಿದೆ. ಹೌದು, ಪೃಥ್ವಿ ಎಂಬ ಯುವಕ ಜೀಪ್ ಮೇಲೆ ಏರಿ ಬೆಂಕಿಯಿಟ್ಟು ಫೋಸ್ ಕೊಟ್ಟಿದ್ದಾನೆ. ಕೂಡಲೇ ಸ್ಥಳೀಯರು ಆತನ ಕೈಯಲ್ಲಿದ್ದ ಪೆಟ್ರೋಲ್ನ್ನು ಕಸಿದುಕೊಂಡಿದ್ದಾರೆ. ಇನ್ನುಆರೋಪಿ ಪೃಥ್ವಿರಾಜ್ ಹುಚ್ಚಾಟದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಘಟನೆ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸಧ್ಯ ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ