ರಾಮನಗರ: ಉದ್ಘಾಟನೆಗೂ ಮುನ್ನವೇ ಒಡೆದ ಪೈಪ್: ಆಕಾಶಕ್ಕೆ‌ ಚಿಮ್ಮಿದ ನೀರು

|

Updated on: Aug 07, 2024 | 7:49 PM

ಉದ್ಘಾಟನೆಗೂ ಮುನ್ನವೇ ಕಾವೇರಿ ಕುಡಿಯುವ ನೀರಿನ ಯೋಜನೆಗೆ ಹಾಕಿದ ಪೈಪ್​ ಒಡೆದು ನೀರು ಆಕಾಶಕ್ಕೆ‌ ಚಿಮ್ಮಿದ ಘಟನೆ ರಾಮನಗರ ಪಟ್ಟಣದ ಎಮ್.ಜಿ.ರಸ್ತೆಯಲ್ಲಿ ನಡೆದಿದೆ. ಇದೇ ಆಗಸ್ಟ್ 15 ಕ್ಕೆ ಉದ್ಘಾಟನೆ ಆಗಬೇಕಿತ್ತು. ಆದರೆ ಉದ್ಘಾಟನೆಗೂ ಮೊದಲೇ ಪೈಪ್‌ ಒಡೆದು ಅವಾಂತರ ಸೃಷ್ಟಿಯಾಗಿದೆ.

ರಾಮನಗರ, ಆ.07: ರಾಮನಗರ(Ramanagara) ಕಾವೇರಿ ನೀರಿನ ಕುಡಿಯುವ ಯೋಜನೆಗೆ ಹಾಕಿದ ಪೈಪ್​ ಉದ್ಘಾಟನೆಗೂ ಮುನ್ನ ಒಡೆದು ನೀರು ಆಕಾಶಕ್ಕೆ‌ ಚಿಮ್ಮಿದ ಘಟನೆ ನಡೆದಿದೆ. ಪ್ರಾಯೋಗಿಕ‌ ಹಂತದಲ್ಲಿರುವ 24×7‌ ಕುಡಿಯುವ ನೀರಿನ ಯೋಜನೆ, ಇದೇ ಆಗಸ್ಟ್ 15 ಕ್ಕೆ ಉದ್ಘಾಟನೆ ಆಗಬೇಕಿತ್ತು. ದುರಾದೃಷ್ಟವಶಾತ್​ ಉದ್ಘಾಟನೆಗೂ ಮುನ್ನ‌ವೇ ಪೈಪ್‌ ಒಡೆದು ಅವಾಂತರ ಸೃಷ್ಟಿಯಾಗಿದೆ. ಹೌದು, ನೀರು ಚಿಮ್ಮಿದ‌ ರಭಸಕ್ಕೆ ಕೆಲ ವಾಹನಗಳು ಜಖಂಗೊಂಡಿದೆ. ಸ್ಥಳಕ್ಕೆ‌ ನಗರಸಭಾ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on