WITT Summit 2025: ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು: ಮಲೇಷ್ಯಾದ ಮಾಜಿ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್
ಟಿವಿ9 ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಕಾರ್ಯಕ್ರಮದಲ್ಲಿ ಮಲೇಷ್ಯಾದ ಮಾಜಿ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್, ಭಾರತದ ಪರವಾಗಿ ಮಾತನಾಡಿದ್ದಾರೆ. ಭಾರತ ಶಾಂತಿ ದಾರಿಯಲ್ಲಿದೆ ವಿಶ್ವಸಂಸ್ಥೆ ರಚನೆಯಾದಾಗಲೂ ಭಾರತ ಯಾವುದೇ ಗುಂಪಿನಲ್ಲಿ ಇರಲಿಲ್ಲ. ಭಾರತವು ಒಂದು ದೊಡ್ಡ ಭೂಪ್ರದೇಶವಾಗಿದೆ, ಆದರೆ ಇದರ ಹೊರತಾಗಿಯೂ ಅದನ್ನು ವಿಶ್ವಸಂಸ್ಥೆಯಲ್ಲಿ ಶಾಶ್ವತ ಸದಸ್ಯ ಎಂದು ಗುರುತಿಸಲಾಗುತ್ತಿಲ್ಲ ಎಂದು ಹೇಳಿದರು. ಭಾರತಕ್ಕೆ ಶಾಶ್ವತ ಸದಸ್ಯತ್ವ ಬೇಕು ಎಂದು ಹೇಳಿದರು.
ದೆಹಲಿ, ಮಾ.29: ನವದೆಹಲಿಯಲ್ಲಿ ಟಿವಿ9 ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ (TV9’s What India Thinks Today) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಲೇಷ್ಯಾದ ಮಾಜಿ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ (Abdullah Shahid), ಯುದ್ಧದ ನಡುವೆ, ವಿಶ್ವಸಂಸ್ಥೆಯ ರಚನೆಯಲ್ಲಿ ಬದಲಾವಣೆಯ ಬೇಡಿಕೆ ಮತ್ತೆ ಮುಖ್ಯಾಂಶಗಳಲ್ಲಿದೆ. ವಿಶ್ವಸಂಸ್ಥೆ ಇನ್ನು ಮುಂದೆ ಪರಿಣಾಮಕಾರಿಯಾಗಿಲ್ಲ ಎಂದು ಹೇಳಿದರು. ಅದರೊಳಗೆ ಬದಲಾವಣೆ ಆಗಬೇಕು. ಪ್ರಸ್ತುತ ಜಾಗತಿಕ ಸನ್ನಿವೇಶದಲ್ಲಿ ಬಹಳಷ್ಟು ಅಸ್ಥಿರತೆ ಮತ್ತು ಅವ್ಯವಸ್ಥೆ ಇದೆ. ವಿಶ್ವಸಂಸ್ಥೆಯನ್ನು ಈ ಉದ್ದೇಶಕ್ಕಾಗಿಯೇ ಸ್ಥಾಪಿಸಲಾಗಿದ್ದರೂ, ಅದಕ್ಕೆ ಪೂರಕವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಹೇಳಿದರು. ಭಾರತ ಯಾವಾಗಲೂ ಶಾಂತಿಯ ಪರವಾಗಿದೆ. ವಿಶ್ವಸಂಸ್ಥೆ ರಚನೆಯಾದಾಗಲೂ ಭಾರತ ಯಾವುದೇ ಗುಂಪಿನಲ್ಲಿ ಇರಲಿಲ್ಲ. ಭಾರತವು ಒಂದು ದೊಡ್ಡ ಭೂಪ್ರದೇಶವಾಗಿದೆ, ಆದರೆ ಇದರ ಹೊರತಾಗಿಯೂ ಅದನ್ನು ವಿಶ್ವಸಂಸ್ಥೆಯಲ್ಲಿ ಶಾಶ್ವತ ಸದಸ್ಯ ಎಂದು ಗುರುತಿಸಲಾಗುತ್ತಿಲ್ಲ.ವಿಶ್ವದಲ್ಲಿ ಶಾಂತಿ ಸ್ಥಾಪಿಸುವ ಪ್ರಯತ್ನಗಳನ್ನು ವೇಗಗೊಳಿಸಲು ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಹೇಳಿದರು. ಇನ್ನು ಜಗತ್ತಿನಲ್ಲಿ ಆಂತರಿಕ ಸಂಘರ್ಷಗಳು ಮುಂದುವರೆದಿವೆ. ಯುರೋಪ್ ಜೊತೆ ನೇರ ಸಂಪರ್ಕ ಹೊಂದಿರದ ವಿಶ್ವದ ದೇಶಗಳನ್ನು ವಿಶ್ವಸಂಸ್ಥೆ ನಿರ್ಲಕ್ಷಿಸಿದೆ ಎಂದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!

ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್

ಪ್ರಧಾನಿ ಹೇಳಿದಂತೆ ಪಾಕ್ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್

ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
