Anti-encroachment drive: ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವಾಗ ಸರ್ಕಾರಕ್ಕೆ ಕೇವಲ ಬಡವರ ಮನೆ ಮಾತ್ರ ಕಾಣಿಸುತ್ತವೆಯೇ?
ಬಿಬಿಎಂಪಿ ಖಾತೆಯನ್ನು ನಿರ್ವಹಿಸುತ್ತಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಆಗೋದನ್ನು ತಪ್ಪಿಸಬೇಕು.
ಬೆಂಗಳೂರು: ಸರ್ಕಾರ ಯಾವುದೇ ಆಗಿರಲಿ, ಒತ್ತುವರಿ ತೆರವು ಕಾರ್ಯಾಚರಣೆ (anti encroachment drive) ಆರಂಭಿಸಿದಾಗ ಅದಕ್ಕೆ ಕೇವಲ ಬಡವರ ಮನೆಗಳು ಮಾತ್ರ ಕಾಣಿಸುತ್ತವೆ ಅನ್ನೋದು ಸ್ಪಷ್ಟವಾಗಿದೆ. ದೊಡ್ಡ ಕುಳಗಳ ಅಪಾರ್ಟ್ ಮೆಂಟ್, ಸಾಪ್ಟ್ ವೇರ್ ಕಂಪನಿಗಳು (software companies); ಸರ್ಕಾರ ಅಥವಾ ಬೃಹತ್ ಬೆಂಗಳೂರು ಮಹಾನನಗರ ಪಾಲಿಕೆ ಸಿಬ್ಬಂದಿಗೆ ಕಾಣೋದಿಲ್ಲ. ಆಫ್ ಕೋರ್ಸ್ ಈ ಕಂಪನಿಗಳಿಂದ ಒತ್ತುವರಿಯಾಗಿದ್ದರೆ, ಅವುಗಳ ಮೇಲೆ ಮಾರ್ಕಿಂಗ್ ಕಾಣಿಸುತ್ತದೆ ಆದರೆ ಒತ್ತುವರಿಯಾದ ಸ್ಥಳವನ್ನು ತೆರವು ಮಾಡುವ ಕೆಲಸ ಮಾತ್ರ ನಡೆಯುವುದೇ ಇಲ್ಲ. ನಗರದ ಹೊಯ್ಸಳ ನಗರದಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು ಅಲ್ಲಿನ ನಿವಾಸಿಗಳು ಈ ತಾರತಮ್ಯದ ಬಗ್ಗೆಯೇ ಅಸಮಾಧಾನ ಹೊರಹಾಕುತ್ತಿದ್ದಾರೆ. ಬಿಬಿಎಂಪಿ ಖಾತೆಯನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನಿರ್ವಹಿಸುತ್ತಿದ್ದಾರೆ. ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಆಗೋದನ್ನು ಅವರು ತಪ್ಪಿಸಬೇಕು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸಲಾಲ್ ಡ್ಯಾಂನ ಗೇಟ್ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್:ಪರಿಷ್ಕರಣೆಗೆ ಗಡುವು ವಿಸ್ತರಣೆ
