Chandrayaan-3 Moon Landing; ವಿಕ್ರಮ ಲ್ಯಾಂಡರ್ ಚಂದ್ರನ ಮೇಲೆ ಇಳಿಯವ ಆ ಕ್ಷಣ ಎಲ್ಲ ಭಾರತೀಯರನ್ನು ಪುಳಕಿತಗೊಳ್ಳಿಸಲಿದೆ: ಯಶವಂತ ಸರ್ದೇಶಪಾಂಡೆ, ರಂಗಕರ್ಮಿ

Updated on: Aug 23, 2023 | 10:50 AM

Chandrayaan-3 Landing: ಹಿಂದೊಮ್ಮೆ, ಯಶವಂತ ಸರ್ದೇಶಪಾಂಡೆ ಚಂದ್ರನ ಇಮೇಜ್ ಅಂತರಿಕ್ಷ ಕಾಯವೊಂದರಿಂದ ಪ್ರಾಪ್ತವಾದಾಗ ಯಾರ್ ಹೆಂಡ್ತಿ ಮಾರೀನೂ ಚಂದ್ರನಷ್ಟು ಛಂದ ಇಲ್ಲ ಅಂತ ತಮ್ಮ ಎಂದಿನ ಹಾಸ್ಯ ಧಾಟಿಯಲ್ಲಿ ಹೇಳಿದ್ದನ್ನು ಇವತ್ತೂ ಪುನರಾವರ್ತಿಸಿದರು.

ಧಾರವಾಡ: ಭಾರತ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) (ISRO) ಅತೀವ ಹೆಮ್ಮೆ, ಅಭಿಮಾನಪಟ್ಟುಕೊಳ್ಳುವುದರ ಜೊತೆಗೆ ಇತಿಹಾಸ ನಿರ್ಮಿಸುವ ಸಮಯ ಹತ್ತಿರವಾಗುತ್ತಿದೆ. ಇಂದು ಸಂಜೆ 6.04 ಕ್ಕೆ ಚಂದ್ರಯಾನ-3 ವಿಕ್ರಮ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ (landing) ಆಗಲಿದೆ. ನಾವು ನಿನ್ನೆಯಿಂದ ಹೇಳುತ್ತರುವಂತೆ ಎಲ್ಲ ಭಾರತೀಯರು ಈ ಅಪೂರ್ವ ಘಳಿಗೆಗಾಗಿ ಕಾತುರದಿಂದ ಎದುರು ನೋಡುತ್ತಿದ್ದಾರೆ. ಥೇಟರ್ ಮತ್ತು ಸಿನಿಮಾಗಳಲ್ಲಿ ಕಮೆಡಿಯನ್ ಆಗಿ ದೊಡ್ಡ ಹೆಸರು ಮಾಡಿರುವ ರಂಗಕರ್ಮಿ ಯಶವಂತ ಸರ್ದೇಶಪಾಂಡೆ (Yashwant Sardeshpande) ಟಿವಿ9 ಕನ್ನಡ ವಾಹಿನಿಯೊಂದಿಗೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಧಾರವಾಡದ ಪ್ರತಿನಿಧಿಯೊಂದಿಗೆ ಮಾತಾಡಿರುವ ಸರ್ದೇಶಪಾಂಡೆ, ಚಂದ್ರಯಾನ-3 ವಿಕ್ರಮ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆಗುವ ಆ ಕ್ಷಣ ಎಲ್ಲ ಭಾರತೀಯರನ್ನು ಪುಳಕಿತಗೊಳ್ಳಿಸಲಿದೆ ಎಂದು ಹೇಳಿದರು. ಹಿಂದೊಮ್ಮೆ ಅವರು, ಚಂದ್ರನ ಇಮೇಜ್ ಅಂತರಿಕ್ಷ ಕಾಯವೊಂದರಿಂದ ಪ್ರಾಪ್ತವಾದಾಗ ಯಾರ್ ಹೆಂಡ್ತಿ ಮಾರೀನೂ ಚಂದ್ರನಷ್ಟು ಛಂದ ಇಲ್ಲ ಅಂತ ತಮ್ಮ ಎಂದಿನ ಹಾಸ್ಯ ಧಾಟಿಯಲ್ಲಿ ಹೇಳಿದ್ದನ್ನು ಇವತ್ತೂ ಪುನರಾವರ್ತಿಸಿದರು.

ಮತ್ತಷ್ಟು ಕನ್ನಡ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More