ಟಿಟ್ ಫಾರ್ ಟ್ಯಾಟ್; ಡಿಕೆ ಸುರೇಶ್ ಆಡಿಯೋ ಬಹಿರಂಗಗೊಳಿಸಿದ ಹೆಚ್ ಡಿ ಕುಮಾರಸ್ವಾಮಿ
ಕುಮಾರಸ್ವಾಮಿಯದ್ದು ಸರ್ಕಾರ ಉರುಳಿಸುವ ಪ್ರಯತ್ನ ಅಂತ ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾಡಿರುವ ಕಾಮೆಂಟ್ ಗೆ ಉತ್ತರ ನೀಡಿದ ಕುಮಾರಸ್ವಾಮಿ, ಎರಡು ಬಾರಿ ಮಂತ್ರಿಯಾದರೂ ಬ್ಯಾಟರಾಯನಪುರಕ್ಕೆ ಅವರಿಂದ ಏನೂ ಮಾಡಲಾಗಿಲ್ಲ, ಮಳೆನೀರು ಮನೆಗಳಿಗೆ ನುಗ್ಗಿದ ಕಾರಣ ಜನ ರಸ್ತೆಗಳಲ್ಲಿ ಮಲಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ರಾಮನಗರ: ನಿಖಿಲ್ ಕುಮಾರಸ್ವಾಮಿ ಪ್ರಚಾರ ಮಡುತ್ತಾ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಹೆಚ್ ಡಿ ಕುಮಾರಸ್ವಾಮಿ, ನಿನ್ನೆ ಚುನಾವಣಾ ಪ್ರಚಾರದಲ್ಲಿ ತಾವು ಮಾತಾಡಿದ ಆಡಿಯೋವನ್ನು ಬಹಿರಂಗ ಮಾಡಿದ್ದ ಡಿಕೆ ಸುರೇಶ್ಗೆ ಕೌಂಟರ್ ರೂಪದಲ್ಲಿ ಮಾಜಿ ಸಂಸದರು ಸಿಪಿ ಯೋಗೇಶ್ವರ್ ಬಗ್ಗೆ ಮಾತಾಡಿದ್ದ ಅಡಿಯೋವನ್ನು ಮಾಧ್ಯಮದವರಿಗೆ ಕೇಳಿಸಿದರು. ಬಿಡದಿಯಲ್ಲಿ ಮೆಗಾಸಿಟಿ ಮಾಡ್ತೀನಿ ಅಂತ ಜನರಿಗೆ ಟೋಪಿ ಹಾಕಿದ್ನಲ್ಲ ಯೋಗೇಶ್ವರ್…ಅಂತ ಸುರೇಶ್ ಹೇಳಿರೋದು ಕೇಳಿಸುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಲೋಕಾಯುಕ್ತ ಎಡಿಜಿಪಿಗೆ ಬೆದರಿಕೆ ಆರೋಪ: ಕುಮಾರಸ್ವಾಮಿಗೆ ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್
Loading...
Unable to load recommendations.
Follow Us