AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಎಲ್ ಸಂತೋಷ್ ನಾಳೆಯೇ ಆಪರೇಷನ್ ಕಮಲ ನಡೆಸಲಿ, ಎಷ್ಟು ಶಾಸಕರನ್ನು ಸೆಳೆಯುತ್ತಾರೆ ಅಂತ ನೋಡೇಬಿಡೋಣ: ಜಗದೀಶ್ ಶೆಟ್ಟರ್

ಬಿಎಲ್ ಸಂತೋಷ್ ನಾಳೆಯೇ ಆಪರೇಷನ್ ಕಮಲ ನಡೆಸಲಿ, ಎಷ್ಟು ಶಾಸಕರನ್ನು ಸೆಳೆಯುತ್ತಾರೆ ಅಂತ ನೋಡೇಬಿಡೋಣ: ಜಗದೀಶ್ ಶೆಟ್ಟರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 01, 2023 | 11:45 AM

ರಾಜ್ಯ ಬಿಜೆಪಿ ಕೆಲವೇ ನಾಯಕರ ಹಿಡಿತದಲ್ಲಿದೆ, ಅವರ ಕದಂಬ ಬಾಹುಗಳಿಂದ ಪಕ್ಷವನ್ನು ಬಿಡಿಸದೇ ಹೋದರೆ ಉಳಿಗಾಲವಿಲ್ಲ; ದೆಹಲಿತ ವರಿಷ್ಠರು ಎಲ್ಲ ಗೊತ್ತಿದ್ದೂ ಯಾಕೆ ಸುಮ್ಮನಿದ್ದಾರೋ ಗೊತ್ತಿಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದರು. ಕಾಂಗ್ರೆಸ್ 135 ಶಾಸಕರನ್ನೊಳಗೊಂಡ ಗಟ್ಟಿಮುಟ್ಟಾದ ಸರ್ಕಾರ, ಇಂಥ ಸರ್ಕಾರವನ್ನು ಯಾರು ತಾನೆ ಬಿಟ್ಟು ಹೋಗುವುದು ಸಾಧ್ಯ? ಎಂದು ಶೆಟ್ಟರ್ ಪ್ರಶ್ನಿಸಿದರು.

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದ 45 ಪ್ರಮುಖ ನಾಯಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ನಿನ್ನೆ ಬೆಂಗಳೂರಲ್ಲಿ ನಡೆದ ಸಭೆಯೊಂದರಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ (BL Santosh) ಹೇಳಿದ್ದರು. ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ (Jagadish Shettar), ಸಂತೋಷ್ ನಾಳೆಯೇ ಆಪರೇಶನ್ ಕಮಲ (Operation Lotus) ನಡೆಸಲಿ, ಎಷ್ಟು ಕಾಂಗ್ರೆಸ್ ನಾಯಕರನ್ನು ಅವರು ಸೆಳೆಯುತ್ತಾರೋ ನೋಡಿಬಿಡೋಣ ಅಂತ ಸವಾಲೆಸೆದರು. ಕಾಂಗ್ರೆಸ್ 135 ಶಾಸಕರನ್ನೊಳಗೊಂಡ ಗಟ್ಟಿಮುಟ್ಟಾದ ಸರ್ಕಾರ, ಇಂಥ ಸರ್ಕಾರವನ್ನು ಯಾರು ತಾನೆ ಬಿಟ್ಟು ಹೋಗುವುದು ಸಾಧ್ಯ? ಎಂದು ಹೇಳಿದ ಶೆಟ್ಟರ್, ರಾಜ್ಯದಲ್ಲಿ ಬಿಜೆಪಿ ಒಂದು ಮುಳುಗುವ ಹಡಗಿನ ಸ್ಥಿತಿಯಲ್ಲಿದೆ, ಸಂತೋಷ್ ತಮ್ಮ ಶಾಸಕರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಿ ಎಂದರು. ರಾಜ್ಯ ಬಿಜೆಪಿ ಕೆಲವೇ ನಾಯಕರ ಹಿಡಿತದಲ್ಲಿದೆ, ಅವರ ಕದಂಬ ಬಾಹುಗಳಿಂದ ಪಕ್ಷವನ್ನು ಬಿಡಿಸದೇ ಹೋದರೆ ಉಳಿಗಾಲವಿಲ್ಲ; ದೆಹಲಿತ ವರಿಷ್ಠರು ಎಲ್ಲ ಗೊತ್ತಿದ್ದೂ ಯಾಕೆ ಸುಮ್ಮನಿದ್ದಾರೋ ಗೊತ್ತಿಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ