ಜೈಲಿನ ನಿಯಮಗಳು ಎಲ್ಲಾ ಕೈದಿಗಳಿಗೆ ಸಮನಾಗಿರಬೇಕು: ಯದುವೀರ್ ಕೃಷ್ಣದತ್ ಒಡೆಯರ್, ಸಂಸದ

|

Updated on: Aug 27, 2024 | 4:28 PM

ಕೈದಿಗಳ ನಡುವೆ ತಾರತಮ್ಯ ನಡೆಯುತ್ತಿದ್ದರೆ, ಕೆಲವು ಅಯ್ದ ಕೈದಿಗಳಿಗೆ ಉಳಿದವರಿಗಿಂತ ಭಿನ್ನ ಟ್ರೀಟ್ಮೆಂಟ್ ಸಿಗುತ್ತಿದ್ದರೆ ಅದಕ್ಕೆ ರಾಜ್ಯದ ಗೃಹ ಸಚಿವರು ಉತ್ತರ ನೀಡಬೇಕಾಗುತ್ತದೆ, ಜೈಲಿನ ಶಿಸ್ತು ಮತ್ತು ಶಿಷ್ಟಾಚಾರಕ್ಕೆ ಎಲ್ಲ ಕೈದಿಗಳು ಬದ್ಧರಾಗಿರಬೇಕು ಎಂದು ಯದುವೀರ್ ಕೃಷ್ಣದತ್ ಒಡೆಯರ್ ಹೇಳಿದರು.

ಮೈಸೂರು: ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಕೊಲೆ ಅರೋಪಿ ಚಿತ್ರನಟ ದರ್ಶನ್​ಗೆ ವಿಶೇಷ ಆತಿಥ್ಯ ಸಿಗುತ್ತಿರೋದು ಸರಿಯಲ್ಲ, ಅರೋಪಿಗಳು ಮತ್ತು ಕೈದಿಗಳು ಯಾರೇ ಅಗಿರಲಿ, ಜೈಲಿನ ನಿಯಮಗಳು ಎಲ್ಲರಿಗೂ ಸಮಾನವಅಗಿರಬೇಕು, ಒಬ್ಬರ ಕಣ್ಣಿಗೆ ಬೆಣ್ಣೆ ಮತ್ತೊಬ್ಬರ ಕಣ್ಣಿಗೆ ಸುಣ್ಣದಂಥ ಸ್ಥಿತಿ ನಿರ್ಮಾಣವಾಗಬಾರದು ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ ಒಡೆಯರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ದರ್ಶನ್​ರನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವ ಪರಿಸ್ಥಿತಿ ಇದ್ದರೆ ಖಂಡಿತ ಮಾಡ್ತೀವಿ: ಸಿದ್ದರಾಮಯ್ಯ

Follow us on