ಕನ್ನಡ ಭಾಷೆಯ ಬಗ್ಗೆ ಮಾತಾಡಲು ಕಮಲ್ ಹಾಸನ್ಗೆ ಇರೋ ಯೋಗ್ಯತೆಯಾದರೂ ಏನು? ನಾರಾಯಣಗೌಡ, ಕರವೇ
ಕನ್ನಡಿಗರಿಗೆ ಸಹನೆ ಜಾಸ್ತಿ, ಸಹಿಸಿಕೊಳ್ಳೋದು ಒಳ್ಳೆಯತನದ ಲಕ್ಷಣ, ಆದರೆ ಬೇರೆಯವರು ಅದನ್ನು ದೌರ್ಬಲ್ಯವೆಂದು ಭಾವಿಸಬಾರದು, ಕನ್ನಡಿಗರು ಮೃದು ಸ್ವಭಾವದವರು ಮತ್ತು ಸ್ನೇಹ ಜೀವಿಗಳು; ಆದರೆ ಭಾಷೆ-ನೆಲ-ಜಲದ ವಿಷಯದಲ್ಲಿ ನಮ್ಮನ್ನು ಯಾರಾದರೂ ಕೆಣಕಿದರೆ ಒಗ್ಗೂಡಿ ಮುಗಿ ಬೀಳುತ್ತೇವೆ ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ಹೇಳಿದರು.
ಬೆಂಗಳೂರು, ಮೇ 28: ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ಹಗುರವಾಗಿ ಆಡಿದ ಮಾತು ಬಹಳ ದುಬಾರಿಯಾಗಿದೆ. ಇಂದು ನಮ್ಮ ವರದಿಗಾರನೊಂದಿಗೆ ಮಾತಾಡಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿಎ ನಾರಾಯಣಗೌಡ (TA Narayanagowda), ಕಮಲ್ ಹಾಸನ್ ಕೇವಲ ತಮಿಳರನ್ನು ಓಲೈಸಲು ಮತ್ತು ತನ್ನ ಭಾಷೆಯ ಮೇಲಿನ ದುರಭಿಮಾನದಿಂದ ಕನ್ನಡದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಾರೆ. ಅವರಿಗೆ ಮಾತಾಡುವ ಚಪಲವಿದ್ದರೆ ತಮಿಳು ಭಾಷೆಯ ಬಗ್ಗೆ ಮಾತಾಡಿಕೊಳ್ಳಲಿ, ಕನ್ನಡ ಭಾಷೆ ಕುರಿತು ಮಾತಾಡಲು ಅವರಿಗೆ ಇರುವ ಯೋಗ್ಯತೆಯಾದರೂ ಏನು? ತಾನಾಡಿರುವ ಮಾತುಗಳನ್ನು ಕಮಲ ಹಾಸನ್ ಕೂಡಲೇ ವಾಪಸ್ಸು ತೆಗೆದುಕೊಳ್ಳಬೇಕು, ಎಂದು ನಾರಾಯಣಸ್ವಾಮಿ ಹೇಳಿದರು.
ಇದನ್ನೂ ಓದಿ: ಕಮಲ್ ಹಾಸನ್ ಹೇಳಿಕೆ ವಿರುದ್ಧ ಧ್ವನಿ ಎತ್ತಿದ ಅಹಿಂಸಾ ಚೇತನ್; ಉಳಿದ ಸೆಲೆಬ್ರಿಟಿಗಳ ಮೌನವೇಕೆ?
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನನ್ನ ಪತ್ರ ಸಿಎಂ ಏನು ಮಾಡಬೇಕೆಂದು ಕುಮಾರಸ್ವಾಮಿ ಹೇಳಬೇಕಿಲ್ಲ: ಪಾಟೀಲ್

ಒಳ್ಳೆಯದಕ್ಕೂ, ಕೆಟ್ಟದ್ದಕ್ಕೂ ಓಕೆ ಅಂತಾಳೆ; ಪತ್ನಿ ಬಗ್ಗೆ ಮಾತಾಡಿದ ಹಂಸಲೇಖ

ಈಗ ಅನುಮತಿ ನೀಡಿದರೆ ಏನು ಪ್ರಯೋಜನ? ಪತ್ರಕ್ಕೆ ಉತ್ತರ ಕೂಡ ಇಲ್ಲ: ಖರ್ಗೆ

ಗುತ್ತಿಗೆದಾರನ ಹತ್ಯೆ: ಕೊಚ್ಚಿ ಕೊಲ್ಲುತ್ತಿರುವ ಭಯಾನಕ ದೃಶ್ಯ ಇಲ್ಲಿದೆ!
