Kammaragatte Karnika: ಭೂಲೋಕದ ಮುತ್ತು ಗಗನಕ್ಕೆ ಏರಿತಾಲೇ; ನಾಗರ ಪಂಚಮಿಯಂದು ದುಂಡಯ್ಯ ಕಾರ್ಣಿಕ ನುಡಿ
ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಮ್ಮಾರಗಟ್ಟೆ ಗ್ರಾಮದಲ್ಲಿರುವ ಪ್ರಸಿದ್ಧ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ನಾಗರ ಪಂಚಮಿ ಹಬ್ಬದ ಸಂದರ್ಭದಲ್ಲಿ ದುಂಡಯ್ಯ ಕಾರ್ಣಿಕ ಪೂಜಾರಿ ಅವರು ನುಡಿದ ಕಾರ್ಣಿಕವು ಭಕ್ತರಲ್ಲಿ ಭರವಸೆ ಮೂಡಿಸಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಈ ಧಾರ್ಮಿಕ ವಿಧಿ ನೆರವೇರಿತು.
ದಾವಣಗೆರೆ, ಆಗಸ್ಟ್ 18: ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಮ್ಮಾರಗಟ್ಟೆ ಗ್ರಾಮದಲ್ಲಿರುವ ಪ್ರಸಿದ್ಧ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ನಾಗರ ಪಂಚಮಿ ಹಬ್ಬದ ಸಂದರ್ಭದಲ್ಲಿ ದುಂಡಯ್ಯ ಕಾರ್ಣಿಕ ಪೂಜಾರಿ ಅವರು ನುಡಿದ ಕಾರ್ಣಿಕವು ಭಕ್ತರಲ್ಲಿ ಭರವಸೆ ಮೂಡಿಸಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಈ ಧಾರ್ಮಿಕ ವಿಧಿ ನೆರವೇರಿತು.
ಈ ವರ್ಷದ ಕಾರ್ಣಿಕ ನುಡಿಗಳು, “ಅಶ್ವಿನಿ ಕೂಸು, ಬೆಟ್ಟಕ್ಕೆ ಏರಿತ್ತಿರಲ್ಲೇ, ಭೂಲೋಕದ ಮುತ್ತು ಗಗನಕ್ಕೆ ಏರಿತ್ತಿರಲ್ಲೇ ಗೋವಿಂದಾ!” ಎಂಬ ಸಾಂಪ್ರದಾಯಿಕ ಶೈಲಿಯಲ್ಲಿ ಉಚ್ಚರಿಸಲ್ಪಟ್ಟವು. ಈ ನುಡಿಗಳು ರಾಜ್ಯದಲ್ಲಿ ಸಮೃದ್ಧಿ ಮತ್ತು ಅಭಿವೃದ್ಧಿಯ ಸಂಕೇತವಾಗಿವೆ ಎಂದು ವ್ಯಾಖ್ಯಾನಿಸಲಾಗಿದೆ. ಕಾರ್ಣಿಕ ಪೂಜಾರಿಗಳ ಪ್ರಕಾರ, “ಭೂಲೋಕದ ಮುತ್ತು ಗಗನಕ್ಕೆ ಏರಿತಾಲೇ” ಎಂದರೆ ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಉತ್ತಮ ಮಳೆಯಾಗಲಿದೆ, ರೈತರಿಗೆ ಹೇರಳವಾದ ಬೆಳೆ ದೊರೆಯಲಿದೆ ಮತ್ತು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಲಿದೆ ಎಂದರ್ಥ.
ಕಮ್ಮಾರಗಟ್ಟೆ ಕಾರ್ಣಿಕವು ಶತಮಾನಗಳಿಂದಲೂ ನಡೆದುಕೊಂಡು ಬಂದಿರುವ ಒಂದು ಮಹತ್ವದ ಪರಂಪರೆಯಾಗಿದೆ. ಇದು ಸ್ಥಳೀಯ ಸಮುದಾಯಕ್ಕೆ ಮುಂದಿನ ಕೃಷಿ ವರ್ಷದ ಬಗ್ಗೆ ಭರವಸೆ ಮತ್ತು ಮಾರ್ಗದರ್ಶನ ನೀಡುತ್ತದೆ. ಈ ವರ್ಷದ ಸಕಾರಾತ್ಮಕ ಕಾರ್ಣಿಕ ನುಡಿಗಳಿಂದಾಗಿ ರಾಜ್ಯದ ರೈತರು ಹಾಗೂ ಜನಸಾಮಾನ್ಯರು ಆಶಾವಾದಿಗಳಾಗಿದ್ದಾರೆ. ಇದು ಕೃಷಿ ವಲಯಕ್ಕೆ ಶುಭ ಸೂಚಕವಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
