ನಾನು ಕೇಂದ್ರದಲ್ಲಿ ಆರೋಗ್ಯ ಮಂತ್ರಿಯಾಗುವುದನ್ನು ಜನ ಬಯಸುತ್ತಿದ್ದಾರೆ: ಡಾ ಸಿಎನ್ ಮಂಜುನಾಥ್

|

Updated on: Jun 07, 2024 | 11:49 AM

ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಹೃದ್ರೋಗ ತಜ್ಞನಾಗಿ ಕೆಲಸ ಮಾಡಿರುವ ಜೊತೆಗೆ 18 ವರ್ಷಗಳ ಕಾಲ ಸಂಸ್ಥೆಯ ನಿರ್ದೇಶಕನಾಗಿಯೂ ಕೆಲಸಮಾಡಿರುವುದರಿಂದ ಆಡಳಿತಾತ್ಮಕ ಅಂಶಗಳು ಸಹ ತನಗೆ ಚೆನ್ನಾಗಿ ಗೊತ್ತು ಎಂದು ಡಾ ಮಂಜುನಾಥ್ ಅವರು ಹೇಳುತ್ತಾರೆ.

ದೆಹಲಿ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಡಾ ಸಿಎನ್ ಮಂಜುನಾಥ್ (Dr CN Manjunath) ಸರಳ ವ್ಯಕ್ತಿ ಮತ್ತು ಶಿಸ್ತಿನ ಸಿಪಾಯಿ ಕೂಡ ಹೌದು. ಇವತ್ತು ದೆಹಲಿಯಲ್ಲಿ ಅವರು ಟೈ ಧರಿಸಿ ಓಡಾಡುತ್ತಿದ್ದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಎನ್ ಡಿಎ ಸರ್ಕಾರ (NDA government) ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವುದರಿಂದ ಮೊದಲ ಮತ್ತು ಎರಡನೇ ಅವಧಿಯಲ್ಲಿ ಅರಂಭಗೊಂಡಿದ್ದ ಅಭಿವೃದ್ಧಿ ಕಾರ್ಯಗಳು (development works) ಮುಂದುವರಿಯಲಿವೆ ಎಂದರು. ಒಬ್ಬ ವೈದ್ಯನಾಗಿ ಮತ್ತು ಹೃದ್ರೋಗ ತಜ್ಞನಾಗಿ ಸುದೀರ್ಘ ಅವಧಿವರೆಗೆ ಸೇವೆ ಸಲ್ಲಿಸಿರುವುದರಿಂದ ತನ್ನಿಂದ ಉಪಯೋಗವಾದೀತು ಎಂಬ ಭಾವನೆ ತಳೆದಿರುವ ಜನ ತಾನು ಕೇಂದ್ರದಲ್ಲಿ ಆರೋಗ್ಯ ಸಚಿವನಾಗಲಿ ಅಂತ ಬಯಸಿದ್ದಾರೆ. ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಹೃದ್ರೋಗ ತಜ್ಞನಾಗಿ ಕೆಲಸ ಮಾಡಿರುವ ಜೊತೆಗೆ 18 ವರ್ಷಗಳ ಕಾಲ ಸಂಸ್ಥೆಯ ನಿರ್ದೇಶಕನಾಗಿಯೂ ಕೆಲಸಮಾಡಿರುವುದರಿಂದ ಆಡಳಿತಾತ್ಮಕ ಅಂಶಗಳು ಸಹ ತನಗೆ ಚೆನ್ನಾಗಿ ಗೊತ್ತು ಎಂದು ಅವರು ಹೇಳುತ್ತಾರೆ. ಇದು ಸಮ್ಮಿಶ್ರ ಸರ್ಕಾರವಾಗಿರುವುದರಿಂದ ಹಲವಾರು ಸಮಸ್ಯೆಗಳಿರುತ್ತವೆ ಮತ್ತು ಎಲ್ಲಕ್ಕೂ ಮೊದಲು ಸರ್ಕಾರದ ರಚನೆಯಾಗಬೇಕು, ಅಮೇಲೆ ಮಂತ್ರಿಮಂಡಳದ ಬಗ್ಗೆ ನಾಯಕರು ಯೋಚನೆ ಮಾಡುತ್ತಾರೆ ಎಂದು ಮಂಜುನಾಥ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಧರ್ಮ-ಅಧರ್ಮಗಳ ವ್ಯಾಖ್ಯಾನ ಮಾಡಲಾರೆ, ಚುನಾವಣೆಯಲ್ಲಿ ಸ್ಪರ್ಧೆ ಆರೋಗ್ಯಕರವಾಗಿರಬೇಕು: ಡಾ ಸಿಎನ್ ಮಂಜುನಾಥ್ 

Follow us on