AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಲುವಿನ ನಂತರ ಹಿರಿಯರಾದ ದೇವೇಗೌಡ ಮತ್ತು ಯಡಿಯೂರಪ್ಪರ ಆಶೀರ್ವಾದ ಪಡೆದಿರುವೆ: ಡಾ ಮಂಜುನಾಥ್

ಗೆಲುವಿನ ನಂತರ ಹಿರಿಯರಾದ ದೇವೇಗೌಡ ಮತ್ತು ಯಡಿಯೂರಪ್ಪರ ಆಶೀರ್ವಾದ ಪಡೆದಿರುವೆ: ಡಾ ಮಂಜುನಾಥ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 05, 2024 | 10:47 AM

ತಮ್ಮ ಗೆಲುವಿಗೆ ಬೇರೆ ಬೇರೆ ಕಾರಣಗಳಿವೆ, ಬಿಜೆಪಿ ಹಾಗೂ ಜೆಡಿಎಸ್ ಒಗ್ಗಟಟ್ಟಿನಿಂದ ಕೆಲಸ ಮಾಡಿದ್ದು ಪ್ರಮುಖ ಕಾರಣವಾದರೆ ಜನ ಬದಲಾವಣೆ ಬಯಸಿದ್ದು ಮತ್ತೊಂದು ಬಲವಾದ ಕಾರಣ ಎಂದು ಮಂಜುನಾಥ್ ಹೇಳಿದರು. ಕೇಂದ್ರದಲ್ಲಿ ಮಂತ್ರಿಯಾಗುವ ಬಗ್ಗೆ ತಾನು ಯೋಚನೆ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಬೆಂಗಳೂರು: ದೈತ್ಯಸಂಹಾರಿ (giant killer) ಡಾ ಸಿಎನ್ ಮಂಜುನಾಥ್ (Dr CN Manjunath) ಬೆಂಗಳೂರು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿ ತಮ್ಮ ಮಾವ ಮತ್ತು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ (HD Devegowda) ಆಶೀರ್ವಾದ ಪಡೆದು ಬಿಎಸ್ ಯಡಿಯೂರಪ್ಪನವರನ್ನು ಭೇಟಿಯಾದ ನಂತರ ಟಿವಿ9 ಪ್ರತಿನಿಧಿಯೊಂದಿಗೆ ಮಾತಾಡಿದರು. ತಮ್ಮ ಅಭೂತಪೂರ್ವ ಗೆಲುವನ್ನು ಅವರು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಹಾಗೂ ಕ್ಷೇತ್ರದ ಜನತೆಗೆ ಸಮರ್ಪಿಸಿದರು. ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾತಾಡಿದ ಅವರು ಪ್ರಮುಖ ಕ್ಷೇತ್ರಗಳಾದ ಅರೋಗ್ಯ, ಶಿಕ್ಷಣ ಮತ್ತು ಕೃಷಿ ಮೊದಲಾದವುಗಳಲ್ಲಿ ಮೂಲಭೂತ ಸಮಸ್ಯೆಗಳಿವೆ, ಅವುಗಳನ್ನು ಬಗೆಹರಿಸಲು ಒಬ್ಬ ಸಂಸದನಾಗಿ ಪ್ರಾಮಾಣಿಕ ಪ್ರಯತ್ನ ಮಾಡೋದಾಗಿ ಹೇಳಿದರು. ತಮ್ಮ ಗೆಲುವಿಗೆ ಬೇರೆ ಬೇರೆ ಕಾರಣಗಳಿವೆ, ಬಿಜೆಪಿ ಹಾಗೂ ಜೆಡಿಎಸ್ ಒಗ್ಗಟಟ್ಟಿನಿಂದ ಕೆಲಸ ಮಾಡಿದ್ದು ಪ್ರಮುಖ ಕಾರಣವಾದರೆ ಜನ ಬದಲಾವಣೆ ಬಯಸಿದ್ದು ಮತ್ತೊಂದು ಬಲವಾದ ಕಾರಣ ಎಂದು ಮಂಜುನಾಥ್ ಹೇಳಿದರು. ಕೇಂದ್ರದಲ್ಲಿ ಮಂತ್ರಿಯಾಗುವ ಬಗ್ಗೆ ತಾನು ಯೋಚನೆ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಲೋಕಸಭಾ ಚುನಾವಣೆ ಫಲಿತಾಂಶ; ನನ್ನಿಂದ ಚಿಕಿತ್ಸೆ ಪಡೆದವರ ಪ್ರೀತಿ-ಅಭಿಮಾನ ವೋಟುಗಳಲ್ಲಿ ಪರಿವರ್ತನೆಯಾಗಿದೆ: ಡಾ ಮಂಜುನಾಥ್