ಬೆಳಗಾವಿ ಅಧಿವೇಶನ; ಪಿಎಸ್ಐ ಹಗರಣದಲ್ಲಿ ಭಾಗಿಯಾಗಿರುವವರನ್ನು ಚೆನ್ನಾಗಿ ತದುಕಿ ಜೈಲಿಗೆ ಹಾಕಬೇಕು: ಬಸನಗೌಡ ಪಾಟೀಲ್ ಯತ್ನಾಳ್
Karnataka Assembly Winter Session: ಸದನದಲ್ಲಿ ಮಾತಾಡುವಾಗ ಬಸನಗೌಡ ಯತ್ನಾಳ್ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕಾಲೆಳೆದರು. ಪಿಎಸ್ ಐ ನೇಮಕಾತಿ ಹಗರಣವನ್ನು ಹಾಗೆ ಹೀಗೆ ಮಾಡ್ತೀವಿ ಅಂತ ವೀರಭದ್ರನ ಹಾಗೆ ವೀರಾವೇಶದಿಂದ ಕೂಗಾಡಿದ ಸಚಿವರು ಈಗ್ಯಾಕೆ ಸುಮ್ಮನಾಗಿದ್ದಾರೋ ಅಂತ ಲೇವಡಿ ಮಾಡಿದಾಗ ಉತ್ತರಿಲು ಸಚಿವ ಎದ್ದುನಿಂತರು.
ಬೆಳಗಾವಿ: ಬೆಳಗಾವಿ ವಿಧಾನ ಸಭಾ ಅಧಿವೇಶನದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಸರ್ಕಾರಕ್ಕಿಂತ ತಮ್ಮ ಪಕ್ಷದ ಸದಸ್ಯರಿಗೆ ಹೆಚ್ಚು ಕಂಟಕಪ್ರಾಯರಾಗುತ್ತಿದ್ದಾರೆ! ನಿಮಗೆ ನೆನಪಿರಬಹುದು, ಪಿಎಸ್ ಐ ನೇಮಕಾತಿ ಹಗರಣ (PSI recruitment scam) ಬೆಳಕಿಗೆ ಬಂದಾಗ ಅವರು ನೇರವಾಗಿ ಅಗಿನ ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪನವರ ಮಗ ಬಿವೈ ವಿಜಯೇಂದ್ರ ಮೇಲೆ ಆರೋಪ ಮಾಡಿದ್ದರು. ಇವತ್ತು ಸದನದಲ್ಲಿ ಡಿಸೆಂಬರ್ 23ರಂದು ನಡೆಯಲಿರುವ ಪಿಎಸ್ ಐ ಪರೀಕ್ಷೆಗೆ ಸಂಬಂಧಿಸಿದಂತೆ ಮಾತಾಡಿದ ಯತ್ನಾಳ್ ಪರೀಕ್ಷೆ ಬರೆಯಲಿರುವ ಉದ್ಯೋಗಾಕಾಂಕ್ಷಿಗಳಿಗೆ ಪೂರ್ವತಯಾರಿಗಾಗಿ ಸಮಯ ಸಿಕ್ಕಿರದ ಕಾರಣ ಪರೀಕ್ಷೆಯನ್ನು 6 ತಿಂಗಳು ಇಲ್ಲವೇ ಕನಿಷ್ಟ 3 ತಿಂಗಳು ಮುಂದೂಡಬೇಕೆಂದು ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಮನವಿ ಮಾಡುತ್ತಿರುವುದಾಗಿ ಹೇಳಿದರು. ಮುಂದುವರಿದು ಮಾತಾಡಿದ ಅವರು ಪಿಎಸ್ ಐ ನೇಮಕಾತಿ ಹಗರಣವನ್ನು ತನಿಖೆಗೆ ಒಪ್ಪಿಸಿ ಅದರಲ್ಲಿ ಶಾಮೀಲಾಗಿರುವವರನ್ನು ಒದ್ದು ಜೈಲಿಗೆ ಹಾಕಿಸುವ ಕೆಲಸವಾಗಬೇಕು ಅಂತ ಒತ್ತಾಯಿಸುವುದಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Dec 04, 2023 07:25 PM
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
