‘ಮೆಟ್ಟಿಲು ಥರ ನನ್ನ ತುಳಿದು ಹೋಗಿದ್ದಾರೆ’: ನೋವಿನಿಂದ ಮಾತಾಡಿದ ಕಾರ್ತಿಕ್​

Updated on: Jan 21, 2024 | 11:03 AM

ಸುದೀಪ್​ ಎದುರು ಕಾರ್ತಿಕ್​ ಅವರು ನೋವು ತೋಡಿಕೊಂಡಿದ್ದಾರೆ. ‘ನಾನೇ ಕ್ಷಮೆ ಕೇಳಿಕೊಂಡು ಹೋಗಿದ್ದೇನೆ. ಸೋತು ಸೋತು ಸಾಕಾಗಿದೆ. ಸಾಯೋದಕ್ಕೆ ರೆಡಿ ಇಲ್ಲ ಸರ್​’ ಎಂದು ಕಾರ್ತಿಕ್​ ಮಹೇಶ್​ ಹೇಳಿದ್ದಾರೆ. ‘ಕಾರ್ತಿಕ್ ಅವರು ಪ್ರತಿಯೊಬ್ಬರಿಗೂ ಹರ್ಟ್​ ಮಾಡಿದ್ದಾರೆ’ ಎಂದು ಸಂಗೀತಾ ಶೃಂಗೇರಿ ಆರೋಪಿಸಿದ್ದಾರೆ.

ಬಿಗ್​ ಬಾಸ್​ (BBK 10) ಮನೆಯಲ್ಲಿ ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್​ ಮಹೇಶ್​ (Karthik Mahesh) ಅವರು ಫ್ರೆಂಡ್ಸ್ ಆಗಿದ್ದರು. ಆದರೆ ನಂತರದ ದಿನಗಳಲ್ಲಿ ಅವರಿಬ್ಬರ ನಡುವೆ ಜಗಳ ಪ್ರಾರಂಭ ಆಯಿತು. ಈಗ ಪರಸ್ಪರ ವಿರೋಧಿಗಳ ರೀತಿ ಆಗಿದ್ದಾರೆ. ಕಾರ್ತಿಕ್​ ಜೊತೆ ಇದ್ದ ಬೇರೆ ಗೆಳೆಯರೂ ದೂರ ಆಗಿದ್ದಾರೆ. ನಮ್ರತಾ ಗೌಡ ಕೂಡ ಕಾರ್ತಿಕ್​ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದೇ ವಿಚಾರವನ್ನು ವೀಕೆಂಡ್​ನಲ್ಲಿ ಸುದೀಪ್​ ಪ್ರಸ್ತಾಪಿಸಿದ್ದಾರೆ. ಆಗ ಕಾರ್ತಿಕ್​ ಅವರು ತಮ್ಮ ನೋವು ತೋಡಿಕೊಂಡಿದ್ದಾರೆ. ‘ನಾನೇ ಕ್ಷಮೆ ಕೇಳಿಕೊಂಡು ಹೋಗಿದ್ದೇನೆ. ಸೋತು ಸೋತು ಸಾಕಾಗಿದೆ. ಸಾಯೋದಕ್ಕೆ ರೆಡಿ ಇಲ್ಲ ಸರ್​. ಇವರು ನನ್ನನ್ನು ಮೆಟ್ಟಲು ಥರ ತುಳಿದುಕೊಂಡು ಹೋಗಿದ್ದಾರೆ’ ಎಂದು ಕಾರ್ತಿಕ್​ ಮಹೇಶ್​ ಹೇಳಿದ್ದಾರೆ. ‘ಕಾರ್ತಿಕ್ ಅವರು ಪ್ರತಿಯೊಬ್ಬರಿಗೂ ಹರ್ಟ್​ ಮಾಡಿದ್ದಾರೆ’ ಎಂದು ಸಂಗೀತಾ (Sangeetha Sringeri) ಆರೋಪಿಸಿದ್ದಾರೆ. ‘ನಿರೀಕ್ಷೆಗಳು ಶುರುವಾದರೆ ಅಲ್ಲಿ ಸ್ನೇಹ ಉಳಿಯುವುದಿಲ್ಲ’ ಎಂದು ವಿನಯ್​ ಗೌಡ ಹೇಳಿದ್ದಾರೆ. ಈ ಸಂಚಿಕೆ ಜನವರಿ 21ರ ರಾತ್ರಿ 9 ಗಂಟೆಗೆ ‘ಕಲರ್ಸ್​ ಕನ್ನಡ’ ಮತ್ತು ‘ಜಿಯೋ ಸಿನಿಮಾ’ದಲ್ಲಿ ಪ್ರಸಾರ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More