ದೇವರ ಮೂರ್ತಿ ಎದುರಲ್ಲೇ ಕಿರಣ್ ಶಾಸ್ತ್ರಿ ಕಳ್ಳಾಟ; ಎಲ್ಲವನ್ನೂ ಬಯಲು ಮಾಡಿದ ಸುದೀಪ್

Updated on: Sep 20, 2026 | 3:00 PM

‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನ ಸೆ.20ರ ಸಂಚಿಕೆಯ ಪ್ರೋಮೋ ಇಲ್ಲಿದೆ. ಬಿಗ್ ಬಾಸ್ ಮನೆಯಲ್ಲಿ ಎಲ್ಲ ಕಡೆಗಳಲ್ಲೂ ಕ್ಯಾಮೆರಾ ಇದೆ. ಸ್ಪರ್ಧಿಗಳು ಏನೇ ಮಾಡಿದರೂ ಬಿಗ್ ಬಾಸ್​ಗೆ ತಿಳಿಯುತ್ತದೆ. ಹಾಗಿದ್ದರೂ ಕೂಡ ತಾವು ದೇವರ ವಿಗ್ರಹವನ್ನು ಹಿಡಿದು ಅಲ್ಲಾಡಿಸಿಲ್ಲ ಎಂದು ಕಿರಣ್ ಶಾಸ್ತ್ರಿ ವಾದ ಮಾಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನ ಸೆಪ್ಟೆಂಬರ್ 20ರ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಕಾಮನರ್ ಆಗಿ ದೊಡ್ಮನೆಗೆ ಕಾಲಿಟ್ಟಿರುವ ಕಿರಣ್ ಶಾಸ್ತ್ರಿ ಅವರು ದೇವರ ವಿಗ್ರಹದ ಎದುರು ನಿಂತು ಏನೆಲ್ಲ ಬೇಡಿಕೊಂಡಿದ್ದರು ಎಂಬುದನ್ನು ಬಹಿರಂಗಪಡಿಸಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಎಲ್ಲ ಕಡೆಗಳಲ್ಲೂ ಕ್ಯಾಮೆರಾ ಇದೆ. ಸ್ಪರ್ಧಿಗಳು ಏನೇ ಮಾಡಿದರೂ ಬಿಗ್ ಬಾಸ್​ಗೆ ತಿಳಿಯುತ್ತದೆ. ಹಾಗಿದ್ದರೂ ಕೂಡ ತಾವು ದೇವರ ವಿಗ್ರಹವನ್ನು ಹಿಡಿದು ಅಲ್ಲಾಡಿಸಿಲ್ಲ ಎಂದು ಕಿರಣ್ ಶಾಸ್ತ್ರಿ ಅವರು ವಾದ ಮಾಡಿದ್ದಾರೆ. ಆದರೆ ವಿಡಿಯೋ ಸಮೇತ ಅದನ್ನು ತೋರಿಸಿದಾಗ ಸೈಲೆಂಟ್ ಆಗಿದ್ದಾರೆ. ಈ ಬಗ್ಗೆ ಸೂಪರ್ ಸಂಡೇ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಚರ್ಚೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Sep 20, 2026 02:31 PM
Loading...
Unable to load recommendations.
Follow Us