ಕೋಲಾರ, ಅಕ್ಟೋಬರ್ 14: ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದ ಯುವಕರಾದ ವರದರಾಜ್, ಗಗನ್, ರವಿ, ಹರೀಶ್ ಸೈಕಲ್ನಲ್ಲಿ ಅಯೋಧ್ಯೆಯ ಬಾಲರಾಮನ ದರ್ಶನಕ್ಕೆ ಹೊರಟ್ಟಿದ್ದಾರೆ. ಸುಮಾರು 1900 ಕಿಮೀ ಸೈಕಲ್ ಯಾತ್ರೆ ಮೂಲಕ ದೂರದ ಅಯೋಧ್ಯಾ ಯಾತ್ರೆ ಹೋಗುತ್ತಿರುವ ಯುವಕರು ಇದಕ್ಕೂ ಮೊದಲು ಪಟ್ಟಣದ ಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಯಾತ್ರೆ ಆರಂಭ ಮಾಡಿದ್ದಾರೆ. ಮಾರ್ಗಮಧ್ಯೆ ಹಿಂದೂ ಧರ್ಮ ಜಾಗೃತಿ ಮೂಡಿಸುವುದಾಗಿ ಇವರು ಹೇಳಿಕೊಂಡಿದ್ದಾರೆ. ಯುವಕರ ಸೈಕಲ್ ಯಾತ್ರೆಗೆ ಹಲವಾರು ಸ್ನೇಹಿತರು ಶುಭ ಹಾರೈಸಿ ಬಿಳ್ಕೊಟ್ಟರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ