ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ವ್ಹೀಲ್​ಚೇರ್ ಇಲ್ಲದ್ದಕ್ಕೆ ರೋಗಿಯನ್ನ 3ನೇ ಮಹಡಿಯಿಂದ ಹೊತ್ತು ಸಾಗಿದ ಯುವಕ: ವಿಡಿಯೋ ನೋಡಿ

Edited By:

Updated on: Nov 21, 2025 | 10:33 PM

ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ವ್ಹೀಲ್ ಚೇರ್ ಕೊರತೆ ಮತ್ತು ವೈದ್ಯರ ನಿರ್ಲಕ್ಷ್ಯದಿಂದಾಗಿ, ಪೀಡ್ಸ್ ನಿಂದ ನರಳುತ್ತಿದ್ದ ರೋಗಿಯನ್ನು ಕುಟುಂಬ ಸದಸ್ಯರು ಮೂರನೇ ಮಹಡಿಯಿಂದ ತುರ್ತು ಚಿಕಿತ್ಸಾ ವಿಭಾಗಕ್ಕೆ ಹೊತ್ತುಕೊಂಡು ಬರುವಂತಾಯಿತು. ಕಳೆದ ಮೂರು ದಿನಗಳಿಂದ ದಾಖಲಾಗಿದ್ದ ರೋಗಿಗೆ ವೈದ್ಯಕೀಯ ನೆರವು ಸಿಗದೇ ಸಂಬಂಧಿಕರು ಪರದಾಡಿದ್ದಾರೆ.

ಕೊಪ್ಪಳ, ನವೆಂಬರ್​ 21: ವ್ಹೀಲ್ ಚೇರ್​ ಇಲ್ಲದ ಕಾರಣ ಮೂರನೇ ಮಹಡಿಯಿಂದ ರೋಗಿಯನ್ನು ಸಂಬಂಧಿಕರು ಹೊತ್ತುಕೊಂಡ ಬಂದಿರುವಂತಹ ಅಮಾನವೀಯ ಘಟನೆಯೊಂದು ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. ಪೀಡ್ಸ್ ಬಂದು ರೋಗಿ ನರಳಾಡಿದ್ದಾರೆ. ಮೂರನೇ ಮಹಡಿಗೆ ವೈದ್ಯರು ಬಾರದ ಹಿನ್ನಲೆ ರೋಗಿಯನ್ನು ಎಮರ್ಜೆನ್ಸಿ ವಾರ್ಡ್​ಗೆ ಸಂಬಂಧಿಕರು ಎತ್ತಿಕೊಂಡು ಬಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us
ಶಿವಕುಮಾರ್ ಪತ್ತಾರ್

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More