ಕೊತ್ತೂರು ಮಂಜುನಾಥ್ ಸೇನೆಯ ಬಗ್ಗೆ ಮಾತಾಡಿಲಾರರು, ಅವರೊಬ್ಬ ದೇಶಪ್ರೇಮಿ: ರಾಮಲಿಂಗಾರೆಡ್ಡಿ
ಮಂಜುನಾಥ್ ಹೇಳಿದ್ದನ್ನು ಸಮರ್ಥಿಸುತ್ತೀರಾ ಅಂತ ಕೇಳಿದಾಗ ತಡಬಡಾಯಿಸುವ ರಾಮಲಿಂಗಾರೆಡ್ಡಿ, ಅವರು ಏನು ಹೇಳಿದ್ದಾರೆ ಅಂತಲೇ ಗೊತ್ತಿಲ್ಲ, ಅದರೆ ಸೇನೆಗೆ ಮತ್ತು ನಮ್ಮ ಸೈನಿಕರಿಗೆ ಕಾಂಗ್ರೆಸ್ ನಿಂದ ಯಾವತ್ತೂ ಅಪಮಾನವಾಗಿಲ್ಲ, ಬಿಜೆಪಿಯಿಂದ ಆಗಿದೆ, ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇ ಕಾಂಗ್ರೆಸ್, ಅಗ ಬಿಜೆಪಿ ಮತ್ತು ಜನಸಂಘ ಎರಡೂ ಇರಲಿಲ್ಲ, ಸೇನಾಧಿಕಾರಿಗಳು ಹೇಳುವ ಮಾತನ್ನು ಕಾಂಗ್ರೆಸ್ ಯಾವತ್ತೂ ಪ್ರಶ್ನಿಸಲ್ಲ ಎಂದು ಹೇಳಿದರು.
ರಾಮನಗರ, ಮೇ 17: ಆಪರೇಷನ್ ಸಿಂಧೂರದ ಬಗ್ಗೆ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಹಗುರವಾಗಿ ಮಾತಾಡಿರಲಾರರು, ಆದರೆ ಬಿಜೆಪಿ ನಾಯಕರ ಬಗ್ಗೆ ಮಾತಾಡಿರುವ ಸಾಧ್ಯತೆ ಇದೆಯೆಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಕೊತ್ತೂರು ಮಂಜುನಾಥ್ ಅಪ್ಪಟ ದೇಶಪ್ರೇಮಿ, ದೇಶ ಮತ್ತು ಸೇನೆಯ ವಿರುದ್ಧ ಮಾತಾಡುವ ಜಾಯಮಾನ ಅವರದ್ದಲ್ಲ, ಯುದ್ಧ ಮುಂದುವರಿದಿದ್ದರೆ ನಮ್ಮ ಸೇನೆ ಪಾಕಿಸ್ತಾನವನ್ನು ಬಗ್ಗು ಬಡಿಯುತಿತ್ತು ಎಂದು ಅವರು ಹೇಳಿರಬಹುದು ಅದರೆ ಸೇನೆಯ ವಕ್ತಾರರು ಹಂಚಿಕೊಂಡಿರುವ ಮಾಹಿತಿಯನ್ನು ಯಾರೂ ಪ್ರಶ್ನಿಸಲಾಗದು ಎಂದು ಸಚಿವ ಹೇಳಿದರು.
ಇದನ್ನೂ ಓದಿ: ನಮ್ಮ ಬಹುತೇಕ ಬೇಡಿಕೆಗಳನ್ನು ಪರಿಶೀಲಿಸುವ ಭರವಸೆ ಸಚಿವ ರಾಮಲಿಂಗಾರೆಡ್ಡಿ ನೀಡಿದ್ದಾರೆ: ಷಣ್ಮುಗಪ್ಪ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: May 17, 2025 03:32 PM
Latest Videos