ಕುಡುಕ ಆಟೋರಿಕ್ಷಾ ತನ್ನ ಜೊತೆ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂತ ಗದರಿದರು!

ನಿನ್ನ ಬಾಯಿ ವಾಸನೆಯಿಂದಲೇ ನೀನೊಬ್ಬ ಆಟೋರಿಕ್ಷಾ ಡ್ರೈವರ್ ಅಂತ ಗೊತ್ತು ಮಾಡಿಕೊಳ್ಳಬಹುದು ಎಂದು ಈಶ್ವರಪ್ಪ ಹೇಳುತ್ತಾರೆ. ಇಲ್ಲ ಸರ್, ನಿಮ್ಮ ಅನಿಸಿಕೆ ತಪ್ಪು. ಎಲ್ಲ ಆಟೋ ಡ್ರೈವರ್ ಗಳು ಕುಡುಕರಲ್ಲ, ಕುಡಿಯದೆ ಬೀಡಿ ಸಿಗರೇಟು ಸೇದದೆ ನಿಯತ್ತಿನಿಂದ ಸಂಸಾರಕ್ಕಾಗಿ ದುಡಿಯುವ ಅನೇಕ ಅಟೋರಿಕ್ಷಾ ಡ್ರೈವರ್ ಗಳಿದ್ದಾರೆ. ಎಲ್ಲರೂ ಕುಡುಕರು ಅಂದುಕೊಳ್ಳೋದು ಸರಿಯಲ್ಲ.

ಕುಡುಕ ಆಟೋರಿಕ್ಷಾ ತನ್ನ ಜೊತೆ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂತ ಗದರಿದರು!
|

Updated on: Jul 03, 2024 | 6:05 PM

ಚಿತ್ರದುರ್ಗ: ಹಿರಿಯ ರಾಜಕಾರಣಿ ಕೆಎಸ್ ಈಶ್ವರಪ್ಪ ಹೇಳಬೇಕಾಗಿರೋದನ್ನು ಮುಖದ ಮೇಲೆ ಹೇಳುತ್ತಾರೆ, ಮುಚ್ಚುಮರೆಯೇನೂ ಇಲ್ಲ-ಅದು ಅವರ ರಾಜಕೀಯ ಎದುರಾಳಿಯಾಗಿರಬಹುದು ಅಥವಾ ಅವರೊಂದಿಗೆ ಇಲ್ಲಿ ಸೆಲ್ಫೀ ಕ್ಲಿಕ್ಕಿಸಿಕೊಳ್ಳುತ್ತಿರುವ ಜನರಲ್ಲಿನ ಒಬ್ಬ ಆಟೋ ಚಾಲಕ! ಇವತ್ತು ಈಶ್ವರಪ್ಪ ಚಿತ್ರದುರ್ಗದಲ್ಲಿದ್ದರು. ಅಲ್ಲಿನ ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ಪಡೆದು ಹೊರಡುವಾಗ ಅವರನ್ನು ನೋಡುವ ಕೆಲ ಜನ ಫೋಟೋ ತೆಗಿಸಿಕೊಳ್ಳಲು ಧಾವಿಸುತ್ತಾರೆ. ಅವರಲ್ಲೊಬ್ಬ ಕುಡುಕ ಆಟೋ ಚಾಲಕ. ಫೋಟೋ ತೆಗೆಸಿಕೊಂಡು ದೂರ ಸರಿಯುವಾಗ ಆಟೋ ಚಾಲಕ ಥ್ಯಾಂಕ್ಸ್ ಅಣ್ಣ ಅನ್ನುತ್ತಾನೆ. ಅದಕ್ಕೆ ಈಶ್ವರಪ್ಪ ನಿನ್ನ ಬಾಯಿಂದ ಬರುತ್ತಿರುವ ವಾಸನೆಯಿಂದಲೇ ನೀನೊಬ್ಬ ಅಟೋ ಡ್ರೈವರ್ ಅಂತ ಗೊತ್ತಾಗುತ್ತದೆ ಅನ್ನುತ್ತಾರೆ. ಅದಕ್ಕೆ ಅವನು, ನೋವು ಅಣ್ಣ ಅನ್ನುತ್ತಾನೆ. ಯಾವ ನೋವು? ಕುಡಿತದಿಂದ ನಿನ್ನ ಹೆಂಡತಿಗೆ ನೋವಾಗುತ್ತದೆ ತಾನೇ? ಆಕೆ ಎಲ್ಲಿಗೆ ಹೋಗಬೇಕು? ಅಂತ ಈಶ್ವರಪ್ಪ ಕೇಳುತ್ತಾರೆ. ಇಲ್ಲಣ್ಣ, ಇಲ್ಲಣ್ಣ ಅಂತ ಅವನು ಪೆಪೆಪೆ ಮಾಡುವಾಗ ಈಶ್ವರಪ್ಪ, ಕುಡಿಯೋದನ್ನು ಬಿಡ್ತೀಯಾ ತಾನೆ? ಅನ್ನುತ್ತಾರೆ. ಚಾಲಕ ಹೂಂನಣ್ಣ ಬಿಡ್ತೀನಿ ಅನ್ನುತ್ತಾನೆ. ಏನ್ ಬಿಡ್ತೀಯಾ ನೀನು? ನಿನ್ನ ಜನ್ಮದಲ್ಲಿ ಕುಡಿತ ಬಿಡಕ್ಕಾಗಲ್ಲ ಅನ್ನುತ್ತ ಈಶ್ವರಪ್ಪ ಅಲ್ಲಿಂದ ಹೊರಡುತ್ತಾರೆ.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಶಿವಮೊಗ್ಗ ಡಿಸಿಸಿ ಬ್ಯಾಂಕ್ ಕಾಂಗ್ರೆಸ್ ತೆಕ್ಕೆಗೆ: ಖಾತೆ ತೆರೆದ ಈಶ್ವರಪ್ಪ, ಬಿಎಸ್​ವೈಗೆ ಮುಖಭಂಗ

Follow us
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?
ಸೈಟು ಹಂಚಿಕೆ: ಮುಡಾ ಆಯುಕ್ತರನ್ನು ಭೇಟಿ ಮಾಡಿದ ಮೈಸೂರು ಕಾಂಗ್ರೆಸ್ ಮುಖಂಡರು
ಸೈಟು ಹಂಚಿಕೆ: ಮುಡಾ ಆಯುಕ್ತರನ್ನು ಭೇಟಿ ಮಾಡಿದ ಮೈಸೂರು ಕಾಂಗ್ರೆಸ್ ಮುಖಂಡರು
ಭೈರತಿ ಸುರೇಶ್​ರನ್ನು ಮನಬಂದಂತೆ ಬೈದಾಡಿದ ಹಿರಿಯ ರಾಜಕಾರಣಿ ಹೆಚ್ ವಿಶ್ವನಾಥ್
ಭೈರತಿ ಸುರೇಶ್​ರನ್ನು ಮನಬಂದಂತೆ ಬೈದಾಡಿದ ಹಿರಿಯ ರಾಜಕಾರಣಿ ಹೆಚ್ ವಿಶ್ವನಾಥ್
ಚನ್ನಪಟ್ಟಣದಲ್ಲಿ ಅಭಿವೃದ್ಧಿ ಕೆಲಸಗಳನ್ನು ನಾನೇ ಮಾಡಿದ್ದು: ಕುಮಾರಸ್ವಾಮಿ
ಚನ್ನಪಟ್ಟಣದಲ್ಲಿ ಅಭಿವೃದ್ಧಿ ಕೆಲಸಗಳನ್ನು ನಾನೇ ಮಾಡಿದ್ದು: ಕುಮಾರಸ್ವಾಮಿ
ಜಮೀನಿಗೆ ₹ 62 ಕೋಟಿ ಕೇಳುವ ಸಿಎಂ ರೈತರ ಬಗ್ಗೆ ಯೋಚಿಸಿದರೇ? ಕುಮಾರಸ್ವಾಮಿ
ಜಮೀನಿಗೆ ₹ 62 ಕೋಟಿ ಕೇಳುವ ಸಿಎಂ ರೈತರ ಬಗ್ಗೆ ಯೋಚಿಸಿದರೇ? ಕುಮಾರಸ್ವಾಮಿ
ಮಂಗಳೂರು-ಮೂಡಬಿದರೆ ರಸ್ತೆಯಲ್ಲಿ ಗುಡ್ಡಕುಸಿತವುಂಟಾಗುವ ಭೀತಿ!
ಮಂಗಳೂರು-ಮೂಡಬಿದರೆ ರಸ್ತೆಯಲ್ಲಿ ಗುಡ್ಡಕುಸಿತವುಂಟಾಗುವ ಭೀತಿ!
ಕರಾವಳಿ ಪ್ರಾಂತ್ಯದಲ್ಲಿ ನಿಲ್ಲದ ಮಳೆ ಅಬ್ಬರ, ಅರಬ್ಬೀ ಸಮುದ್ರ ಪ್ರಕ್ಷುಬ್ದ
ಕರಾವಳಿ ಪ್ರಾಂತ್ಯದಲ್ಲಿ ನಿಲ್ಲದ ಮಳೆ ಅಬ್ಬರ, ಅರಬ್ಬೀ ಸಮುದ್ರ ಪ್ರಕ್ಷುಬ್ದ
‘ದರ್ಶನ್ ಆರೋಪಿ , ಕಣ್ಣಾರೆ ನೋಡದ ಪ್ರಕರಣದ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ‘
‘ದರ್ಶನ್ ಆರೋಪಿ , ಕಣ್ಣಾರೆ ನೋಡದ ಪ್ರಕರಣದ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ‘