ಕುಡುಕ ಆಟೋರಿಕ್ಷಾ ತನ್ನ ಜೊತೆ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂತ ಗದರಿದರು!

Updated on: Jul 03, 2024 | 6:05 PM

ನಿನ್ನ ಬಾಯಿ ವಾಸನೆಯಿಂದಲೇ ನೀನೊಬ್ಬ ಆಟೋರಿಕ್ಷಾ ಡ್ರೈವರ್ ಅಂತ ಗೊತ್ತು ಮಾಡಿಕೊಳ್ಳಬಹುದು ಎಂದು ಈಶ್ವರಪ್ಪ ಹೇಳುತ್ತಾರೆ. ಇಲ್ಲ ಸರ್, ನಿಮ್ಮ ಅನಿಸಿಕೆ ತಪ್ಪು. ಎಲ್ಲ ಆಟೋ ಡ್ರೈವರ್ ಗಳು ಕುಡುಕರಲ್ಲ, ಕುಡಿಯದೆ ಬೀಡಿ ಸಿಗರೇಟು ಸೇದದೆ ನಿಯತ್ತಿನಿಂದ ಸಂಸಾರಕ್ಕಾಗಿ ದುಡಿಯುವ ಅನೇಕ ಅಟೋರಿಕ್ಷಾ ಡ್ರೈವರ್ ಗಳಿದ್ದಾರೆ. ಎಲ್ಲರೂ ಕುಡುಕರು ಅಂದುಕೊಳ್ಳೋದು ಸರಿಯಲ್ಲ.

ಚಿತ್ರದುರ್ಗ: ಹಿರಿಯ ರಾಜಕಾರಣಿ ಕೆಎಸ್ ಈಶ್ವರಪ್ಪ ಹೇಳಬೇಕಾಗಿರೋದನ್ನು ಮುಖದ ಮೇಲೆ ಹೇಳುತ್ತಾರೆ, ಮುಚ್ಚುಮರೆಯೇನೂ ಇಲ್ಲ-ಅದು ಅವರ ರಾಜಕೀಯ ಎದುರಾಳಿಯಾಗಿರಬಹುದು ಅಥವಾ ಅವರೊಂದಿಗೆ ಇಲ್ಲಿ ಸೆಲ್ಫೀ ಕ್ಲಿಕ್ಕಿಸಿಕೊಳ್ಳುತ್ತಿರುವ ಜನರಲ್ಲಿನ ಒಬ್ಬ ಆಟೋ ಚಾಲಕ! ಇವತ್ತು ಈಶ್ವರಪ್ಪ ಚಿತ್ರದುರ್ಗದಲ್ಲಿದ್ದರು. ಅಲ್ಲಿನ ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ಪಡೆದು ಹೊರಡುವಾಗ ಅವರನ್ನು ನೋಡುವ ಕೆಲ ಜನ ಫೋಟೋ ತೆಗಿಸಿಕೊಳ್ಳಲು ಧಾವಿಸುತ್ತಾರೆ. ಅವರಲ್ಲೊಬ್ಬ ಕುಡುಕ ಆಟೋ ಚಾಲಕ. ಫೋಟೋ ತೆಗೆಸಿಕೊಂಡು ದೂರ ಸರಿಯುವಾಗ ಆಟೋ ಚಾಲಕ ಥ್ಯಾಂಕ್ಸ್ ಅಣ್ಣ ಅನ್ನುತ್ತಾನೆ. ಅದಕ್ಕೆ ಈಶ್ವರಪ್ಪ ನಿನ್ನ ಬಾಯಿಂದ ಬರುತ್ತಿರುವ ವಾಸನೆಯಿಂದಲೇ ನೀನೊಬ್ಬ ಅಟೋ ಡ್ರೈವರ್ ಅಂತ ಗೊತ್ತಾಗುತ್ತದೆ ಅನ್ನುತ್ತಾರೆ. ಅದಕ್ಕೆ ಅವನು, ನೋವು ಅಣ್ಣ ಅನ್ನುತ್ತಾನೆ. ಯಾವ ನೋವು? ಕುಡಿತದಿಂದ ನಿನ್ನ ಹೆಂಡತಿಗೆ ನೋವಾಗುತ್ತದೆ ತಾನೇ? ಆಕೆ ಎಲ್ಲಿಗೆ ಹೋಗಬೇಕು? ಅಂತ ಈಶ್ವರಪ್ಪ ಕೇಳುತ್ತಾರೆ. ಇಲ್ಲಣ್ಣ, ಇಲ್ಲಣ್ಣ ಅಂತ ಅವನು ಪೆಪೆಪೆ ಮಾಡುವಾಗ ಈಶ್ವರಪ್ಪ, ಕುಡಿಯೋದನ್ನು ಬಿಡ್ತೀಯಾ ತಾನೆ? ಅನ್ನುತ್ತಾರೆ. ಚಾಲಕ ಹೂಂನಣ್ಣ ಬಿಡ್ತೀನಿ ಅನ್ನುತ್ತಾನೆ. ಏನ್ ಬಿಡ್ತೀಯಾ ನೀನು? ನಿನ್ನ ಜನ್ಮದಲ್ಲಿ ಕುಡಿತ ಬಿಡಕ್ಕಾಗಲ್ಲ ಅನ್ನುತ್ತ ಈಶ್ವರಪ್ಪ ಅಲ್ಲಿಂದ ಹೊರಡುತ್ತಾರೆ.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಶಿವಮೊಗ್ಗ ಡಿಸಿಸಿ ಬ್ಯಾಂಕ್ ಕಾಂಗ್ರೆಸ್ ತೆಕ್ಕೆಗೆ: ಖಾತೆ ತೆರೆದ ಈಶ್ವರಪ್ಪ, ಬಿಎಸ್​ವೈಗೆ ಮುಖಭಂಗ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More