ಬೆಂಗಳೂರಿನಲ್ಲಿ ಕೆಎಸ್ಆರ್ಟಿಸಿ ಬಸ್, BMW ಕಾರು ಡಿಕ್ಕಿ: ಏರ್ ಬ್ಯಾಗ್ನಿಂದ ಬದುಕುಳಿದ ದಂಪತಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಬಳಿಕ ರಾಷ್ಟ್ರೀಯ ಹೆದ್ದಾರಿ 4 ಬೇಗೂರಿನ ಪಾಕಶಾಲ ಹೋಟೆಲ್ ಮುಂದೆ ಅಪಘಾತ ಸಂಭವಿಸಿದೆ. ಪೀಣ್ಯಾದ HHV ಕಂಪನಿ ಮಾಲೀಕ ಶ್ರೀಧರ್ ಮತ್ತು ಪತ್ನಿ ರಾಜೇಶ್ವರಿ ಅದೃಷ್ಟವಶಾತ್ ಅಪಘಾತದಿಂದ ಪಾರಾಗಿದ್ದಾರೆ. ಶ್ರೀಧರ್ ಅವರ ಕೈಗೆ ಸಣ್ಣಪುಟ್ಟ ಗಾಯಗಳಾಗಿವೆ.
ನೆಲಮಂಗಲ, ನ.13: KSRTC ಬಸ್ ಹಾಗೂ BMW ಕಾರು ಡಿಕ್ಕಿ ಹೊಡೆದಿದ್ದು ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಬಳಿಕ ರಾಷ್ಟ್ರೀಯ ಹೆದ್ದಾರಿ 4 ಬೇಗೂರಿನ ಪಾಕಶಾಲ ಹೋಟೆಲ್ ಮುಂದೆ ಅಪಘಾತ ಸಂಭವಿಸಿದೆ. ಪೀಣ್ಯಾದ HHV ಕಂಪನಿ ಮಾಲೀಕ ಶ್ರೀಧರ್ ಮತ್ತು ಪತ್ನಿ ರಾಜೇಶ್ವರಿ ಅದೃಷ್ಟವಶಾತ್ ಅಪಘಾತದಿಂದ ಪಾರಾಗಿದ್ದಾರೆ. ಶ್ರೀಧರ್ ಅವರ ಕೈಗೆ ಸಣ್ಣಪುಟ್ಟ ಗಾಯಗಳಾಗಿವೆ. ತುಮಕೂರು ಕಡೆಯಿಂದ ಬರುತಿದ್ದ ಬಸ್ನಿಂದ ಹೋಟೆಲ್ ಟಿಫಿನ್ ಮುಗಿಸಿ ಹೋರ ಬರುತ್ತಿದ್ದ ದಂಪತಿಗಳ ಕಾರು ಡಿಕ್ಕಿ ಹೊಡೆದಿತ್ತು. BMW ಕಾರಿನ ಏರ್ ಬ್ಯಾಗ್ ಓಪನ್ ಆಗಿರುವುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಜಗದೀಶ್ ಭೇಟಿ ನೀಡಿದ್ದು ಅಪಘಾತದ ವಾಹನಗಳನ್ನ ತೆರವು ಮಾಡಲಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow Us
Latest Videos
