ನಾಗರಹೊಳೆ ಅಭಯಾರಣ್ಯದಲ್ಲಿ ವನ್ಯಜೀವಿಗಳಿಗೆ ನೀರಿನ ಹಾಹಾಕಾರ, ಟ್ಯಾಂಕರ್ ಮೂಲಕ ಕೆರೆಕುಂಟೆಗಳಿಗೆ ನೀರು

ಅರುಣ್​ ಕುಮಾರ್​ ಬೆಳ್ಳಿ

Updated on: Mar 06, 2025 | 11:57 AM

ಕಾಡಿನಲ್ಲಿ ನೀರು ಮತ್ತು ಆಹಾರದ ಕೊರತೆಯಾದರೆ ಸಹಜವಾಗಿಯೇ ವನ್ಯಜೀವಿಗಳು ಅರಣ್ಯಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮಗಳಿಗೆ ಲಗ್ಗೆಯಿಡುತ್ತವೆ. ಮಾನವ-ವನ್ಯಜೀವಿಗಳ ನಡುವೆ ಸಂಘರ್ಷದಂಥ ಸ್ಥಿತಿ ನಿರ್ಮಾಣವಾಗಬಾರದು ಎನ್ನುವ ದೃಷ್ಟಿಯಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ನಾಗರಹೊಳೆ ಅಭಯಾರಣ್ಯದಲ್ಲಿರುವ ಕೆರೆಕುಂಟೆಗಳಿಗೆ ನೀರನ್ನು ಟ್ಯಾಂಕರ್ ಮೂಲಕ ತುಂಬಿಸುತ್ತಿದ್ದಾರೆ. ಇದಿನ್ನೂ ಬೇಸಿಗೆಯ ಆರಂಭ ಮಾತ್ರ!

ಮೈಸೂರು, ಮಾರ್ಚ್ 6: ಈ ಸಲ ಸುರಿದಿದ್ದು ಭಾರೀ ಮಳೆ, ಬತ್ತಿದ್ದ ಜಲಾಶಯಗಳೆಲ್ಲ ತುಂಬಿ ತುಳುಕಿದವು, ಹೊಳೆಗಳಲ್ಲಿ ಪ್ರವಾಹದಂತೆ ಹರಿದ ನೀರು, ಕೆರೆಕುಂಟೆಗಳಲ್ಲಿ ಕಂಠಮಟ್ಟ ನೀರು-ಹೌದು ತಾನೇ? ಆದರೆ, ನಾಗರಹೊಳೆ ಅಭಯಾರಣ್ಯದ (Nagarahole Forest Reserve) ಸ್ಥಿತಿ ನೋಡಿ ಹೇಗಿದೆ. ನಮ್ಮ ಮೈಸೂರು ವರದಿಗಾರ ಹೇಳುವ ಪ್ರಕಾರ ಅರಣ್ಯಪ್ರದೇಶದಲ್ಲಿರುವ ಸುಮಾರು 250 ಕೆರೆಕುಂಟೆಗಳು ಬತ್ತಿಹೋಗಿರುವ ಕಾರಣ ವನ್ಯಜೀವಿಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ನೀರು ಅರಸಿಕೊಂಡು ಪ್ರಾಣಿಗಳು ಮಾನವ-ವಾಸ ಪ್ರದೇಶಗಳಿಗೆ ಹೋಗಬಾರದೆನ್ನುವ ದೃಷ್ಟಿಯಿಂದ ಅರಣ್ಯ ಇಲಾಖೆಯು ಟ್ಯಾಂಕರ್​ಗಳ ಮೂಲಕ ಕೆರೆಕುಂಟೆಗಳನ್ನು ತುಂಬಿಸುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ನಾಲ್ಕು ಮರಿಗಳೊಂದಿಗೆ ಹೊಂಡಕ್ಕೆ ಬಂದ ನೀರು ಕುಡಿದ ತಾಯಿ ಹುಲಿ, ನಾಗರಹೊಳೆಯಲ್ಲಿ ಸೆರೆಸಿಕ್ಕ ದೃಶ್ಯ

Published on: Mar 06, 2025 11:11 AM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.