ಟನಲ್ ರಸ್ತೆಗಾಗಿ ಲಾಲ್ಬಾಗ್ನ 6 ಎಕರೆ ಬಳಸಲು ಪರ್ಮಿಷನ್ ಕೊಟ್ರಾ? ಜಂಟಿ ನಿರ್ದೇಶಕರಿಗೆ ಅಶೋಕ್ ಪ್ರಶ್ನೆ!
ಬೆಂಗಳೂರಿನ ಲಾಲ್ಬಾಗ್ನಲ್ಲಿ ಪ್ರಸ್ತಾವಿತ ಸುರಂಗ ರಸ್ತೆ ನಿರ್ಮಾಣಕ್ಕೆ 6 ಎಕರೆ ಭೂಮಿ ಬಳಕೆ ಬಗ್ಗೆ ಶಾಸಕ ಆರ್. ಅಶೋಕ್ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಹಾರ್ಟಿಕಲ್ಚರ್ ಇಲಾಖೆಯ ಜಂಟಿ ನಿರ್ದೇಶಕರನ್ನು ಪ್ರಶ್ನಿಸಿದ ಅಶೋಕ್, ಲಾಲ್ಬಾಗ್ನ ಐತಿಹಾಸಿಕ ಮಹತ್ವ, ಪುರಾತನ ಬಂಡೆ ಮತ್ತು ಕೆಂಪೇಗೌಡ ಗೋಪುರದಂತಹ ಸ್ಮಾರಕಗಳ ರಕ್ಷಣೆಯ ಮಹತ್ವವನ್ನು ಒತ್ತಿ ಹೇಳಿದರು. ಯೋಜನೆಗೆ ಇನ್ನೂ ಅನುಮತಿ ನೀಡಿಲ್ಲ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಬೆಂಗಳೂರು, ನವೆಂಬರ್ 02: ಬೆಂಗಳೂರಿನ ಐತಿಹಾಸಿಕ ಲಾಲ್ಬಾಗ್ (Lalbhag) ಸುರಂಗ ರಸ್ತೆ ನಿರ್ಮಾಣಕ್ಕೆ ಸುಮಾರು 6 ಎಕರೆ ಭೂಮಿ ಬಳಸುವ ಯೋಚನೆಯು ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ವಿಪಕ್ಷ ನಾಯಕ ಆರ್. ಅಶೋಕ್ ಅವರು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರನ್ನು ಪ್ರಶ್ನಿಸಿದ್ದು, ಯೋಜನೆಗೆ ಇಲಾಖೆಯಿಂದ ಅನುಮತಿ ನೀಡಲಾಗಿದೆಯೇ ಎಂದು ಕೇಳಿದ್ದಾರೆ. ಲಾಲ್ಬಾಗ್ನಲ್ಲಿ 300 ದಶಲಕ್ಷ ವರ್ಷಗಳಷ್ಟು ಹಳೆಯದಾದ ಬಂಡೆ ಮತ್ತು 200 ವರ್ಷಗಳಷ್ಟು ಹಳೆಯ ಕೆಂಪೇಗೌಡ ಗೋಪುರವೂ ಇದೆ. ಸುರಂಗ ರಸ್ತೆ ಯೋಜನೆಯು ಲಾಲ್ಬಾಗ್ನ ಪ್ರಮುಖ ಪ್ರವೇಶದ್ವಾರದಿಂದ ಎಂ.ಟಿ.ಆರ್ ಗೇಟ್ ಮತ್ತು ಸಿದ್ದಾಪುರ ಗೇಟ್ವರೆಗೆ ಹಾದುಹೋಗಲಿದೆ ಎಂದು ಹೇಳಿದ್ದಾರೆ.
ಇದಕ್ಕುತ್ತರಿಸಿರುವ ಜಂಟಿ ನಿರ್ದೇಶಕರು, ಇಲಾಖೆಯು ಇನ್ನು ಯಾವುದೇ ಪ್ರಾಜೆಕ್ಟ್ ವರದಿ ಅಥವಾ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅನುಮತಿ ನೀಡುವ ಮೊದಲೇ ಯೋಜನೆಯ ಟೆಂಡರ್ ಪ್ರಕ್ರಿಯೆ ಆರಂಭವಾಗಿರುವುದು ಅಶೋಕ್ ಅವರ ಆಕ್ಷೇಪಕ್ಕೆ ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Video: ಹಾಸ್ಟೆಲ್ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ

