AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂತ್ರಾಲಯ ಮಠಕ್ಕೆ ಕೊಟ್ಟ ಜಾಗ ಮುಸ್ಲಿಂ ರಾಜನ ಸೊತ್ತಿಗೆ ಆಗಿರಲಿಲ್ಲ, ಅದು ಹಿಂದೂಸ್ತಾನಕ್ಕೆ ಸೇರಿದ್ದಾಗಿತ್ತು: ನಾರಾಯಣಪ್ಪ, ಆರ್ ಎಸ್ ಎಸ್ ಮುಖಂಡ

ಮಂತ್ರಾಲಯ ಮಠಕ್ಕೆ ಕೊಟ್ಟ ಜಾಗ ಮುಸ್ಲಿಂ ರಾಜನ ಸೊತ್ತಿಗೆ ಆಗಿರಲಿಲ್ಲ, ಅದು ಹಿಂದೂಸ್ತಾನಕ್ಕೆ ಸೇರಿದ್ದಾಗಿತ್ತು: ನಾರಾಯಣಪ್ಪ, ಆರ್ ಎಸ್ ಎಸ್ ಮುಖಂಡ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 31, 2022 | 4:02 PM

ಅಸಲಿಗೆ ಮುಸಲ್ಮಾನರು ಈ ದೇಶದವರೇ ಅಲ್ಲ. ಬೇರೆ ದೇಶಗಳಿಂದ ಬಂದು ಇಲ್ಲಿ ಬೀಡು ಬಿಟ್ಟಿದ್ದಾರೆ. ನಮ್ಮ ಜಾಗ ನಮಗೆ ಬಿಟ್ಟುಬಿಡಿ ಅಂತ ಹಿಂದೂಗಳು ಹೇಳಿದರೆ ಅವರೆಲ್ಲ ತಮ್ಮ ಮೂಲ ದೇಶಗಳಿಗೆ ಹೋಗಬೇಕಾಗುತ್ತದೆ ಎಂದು ನಾರಾಯಣಪ್ಪ ಹೇಳುತ್ತಾರೆ.

ಮಂತ್ರಾಲಯದಲ್ಲಿ ರಾಯರ ಮಠ ಕಟ್ಟಿರೋದು ಒಬ್ಬ ಮುಸ್ಲಿಂ ಸುಲ್ತಾನ ಕೊಟ್ಟ ಜಾಗದಲ್ಲಿ ಅಂತ ಹೇಳಿಕೆ ನೀಡಿ ಮೊನ್ನೆಯಷ್ಟೇ ಕಾಂಗ್ರೆಸ್ ಪಕ್ಷ ತ್ಯಜಿಸಿರುವ ಸಿ ಎಮ್ ಇಬ್ರಾಹಿಂ (CM Ibrahim) ವಿವಾದ ಸೃಷ್ಟಿಸಿದ್ದಾರೆ. ಅವರು ನೀಡಿರುವ ಹೇಳಿಕೆಗೆ ಆರ್ ಎಸ್ ಎಸ್ ಮುಖಂಡ ಆಪೂ ನಾರಾಯಣಪ್ಪ (Apu Narayanappa) ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇಬ್ರಾಹಿಂ ಹೇಳಿದ್ದೇ ನಿಜವಾದರೆ, ಆ ಮುಸ್ಲಿಂ ರಾಜ ಯಾವ ದೇಶದ ಜಾಗವನ್ನು ಮಠಕ್ಕೆ ಕೊಟ್ಟಿದ್ದಾನೆ? ಅದು ಹಿಂದೂಸ್ತಾನದ ಜಾಗ ತಾನೇ? ಅವನೇನಾದರೂ ಇರಾನ್ ಅಥವಾ ಇರಾಕ್ ನಿಂದ ಜಾಗ ತಂದುಕೊಟ್ಟನೇ? ಮುಸ್ಲಿಂ ಅರಸರು ಭಾರತದ ಮೇಲೆ ದಂಡೆತ್ತಿ ಬಂದರು ಮತ್ತು ಇಲ್ಲಿನ ಕೆಲ ರಾಜರನ್ನು ಸೋಲಿಸಿ ರಾಜ್ಯಭಾರ ನಡೆಸಿದರು. ಹೀಗಿರಿವಲ್ಲಿ, ಹಿಂದೂಸ್ತಾನದ ಜಾಗ ಮಸಲ್ಮಾನ ರಾಜನದು ಹೇಗಾಗುತ್ತದೆ? ಈ ದೇಶ ಹಿಂದೂಗಳದ್ದು, ಮೊದಲು ಇಲ್ಲಿ ಮುಸಲ್ಮಾನರಿರಲಿಲ್ಲ. ಹಿಂದೂಗಳ ಜಾಗ ಹಿಂದೂಗಳಿಗೆ ವಾಪಸ್ಸು ಬಂದಿದೆ ಅಷ್ಟೇ ಎಂದು ನಾರಾಯಣಪ್ಪ ಹೇಳುತ್ತಾರೆ.

ಇನ್ನು ಶೃಂಗೇರಿ ಮತ್ತು ಮೇಲುಕೋಟೆಯಲ್ಲಿ ದೇವಸ್ಥಾನಗಳನ್ನು ಕಟ್ಟಲು ಟಿಪ್ಪು ಸುಲ್ತಾನ ಜಾಗ ಕೊಟ್ಟಿದ್ದಾನೆ ಅಂತ ಹೇಳುತ್ತಾರೆ. ಟಿಪ್ಪು ಯಾರು? ಮೈಸೂರು ಅರಸರ ಅಧೀನದಲ್ಲಿ ಒಬ್ಬ ಸರದಾರನಾಗಿದ್ದ. ಅರಸರ ವಿರುದ್ಧ ದಂಗೆಯೆದ್ದು ಅವರನ್ನು ಸೆರೆವಾಸಕ್ಕೆ ತಳ್ಳಿ ದೊರೆಯಾದ. ಅವನೇನು ತನ್ನ ಸ್ವಂತ ಜಾಗ ಕೊಟ್ಟನೇ? ಎಂದು ನಾರಾಯಣಪ್ಪ ಕೇಳುತ್ತಾರೆ.

ಅಸಲಿಗೆ ಮುಸಲ್ಮಾನರು ಈ ದೇಶದವರೇ ಅಲ್ಲ. ಬೇರೆ ದೇಶಗಳಿಂದ ಬಂದು ಇಲ್ಲಿ ಬೀಡು ಬಿಟ್ಟಿದ್ದಾರೆ. ನಮ್ಮ ಜಾಗ ನಮಗೆ ಬಿಟ್ಟುಬಿಡಿ ಅಂತ ಹಿಂದೂಗಳು ಹೇಳಿದರೆ ಅವರೆಲ್ಲ ತಮ್ಮ ಮೂಲ ದೇಶಗಳಿಗೆ ಹೋಗಬೇಕಾಗುತ್ತದೆ ಎಂದು ನಾರಾಯಣಪ್ಪ ಹೇಳುತ್ತಾರೆ.

ಆರ್ ಎಸ್ ಎಸ್ ಮುಖಂಡ ನಾರಾಯಣಪ್ಪನವರ ಈ ವಿಡಿಯೋ ವೈರಲ್ ಅಗಿದೆ.

ಇದನ್ನೂ ಓದಿ:   CM Ibrahim: ದೇವೇಗೌಡ-ಕುಮಾರಸ್ವಾಮಿ ಜೊತೆ ಚರ್ಚೆ ಫಲಪ್ರದ, ಮಾತುಕತೆಯಿಂದ ಸಂತೋಷವಾಗಿದೆ ಎಂದ ಸಿ ಎಂ ಇಬ್ರಾಹಿಂ